ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳಾದ ದಿ. ಶಿವಕುಮಾರ ಶ್ರೀಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನುಡಿನಮನ ಸಲ್ಲಿಸಿದರು. 

ವಾರಾಣಸಿ: ಇಲ್ಲಿ ಮಂಗಳವಾರ ಆರಂಭವಾದ ಪ್ರವಾಸಿ ಭಾರತ ದಿವಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳಾದ ದಿ. ಶಿವಕುಮಾರ ಶ್ರೀಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನುಡಿನಮನ ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಮೋದಿ ಅವರು ಆರಂಭದಲ್ಲೇ ಸಿದ್ಧಗಂಗಾ ಯತಿಗಳು ಶಿವಸಾಯುಜ್ಯ ಹೊಂದಿದ ಸುದ್ದಿಯನ್ನು ಪ್ರಸ್ತಾಪಿಸಿದರು. ‘ಸಭಿಕರಿಗೆಲ್ಲ ಸ್ವಾಗತ. 

Scroll to load tweet…

ನಾನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಡಾ| ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿದ ಬಗ್ಗೆ ಸಂತಾಪ ವ್ಯಕ್ತಪಡಿಸಲು ಬಯಸುತ್ತೇನೆ. ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವ ಸಂದರ್ಭ ಒದಗಿ ಬಂದಿತ್ತು’ ಎಂದು ಹೇಳಿದರು. ನಂತರ ಅವರು ಪ್ರವಾಸಿ ಭಾರತೀಯ ದಿವಸದ ಭಾಷಣತ್ತ ಹೊರಳಿದರು.