ಭಾರತೀಯ ರಕ್ತ ಇರೋರು ಸಾಕ್ಷಿ ಕೇಳಲ್ಲ: ಪ್ರಧಾನಿ ಮೋದಿ!
ಸಾಕ್ಷಿ ಕೇಳುತ್ತಿರುವ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ| ಭಾರತೀಯ ರಕ್ತ ಇರುವವರು ಸಾಕ್ಷಿ ಕೇಳೊದಿಲ್ಲ ಎಂದ ಮೋದಿ| ಬಾಲಾಕೋಟ್ ಸಾಕ್ಷಿ ಕೇಳಿದವರಿಗೆ ಪ್ರಧಾನಿ ಗುದ್ದು| ಮುಂಬೈ ದಾಳಿಯ ಬಳಿಕ ಕ್ರಮ ಕೈಗೊಳ್ಳದ ಯುಪಿಎ ಸರ್ಕಾರಕ್ಕೆ ಛಿಮಾರಿ|
ನವದೆಹಲಿ(ಮಾ.09): ಭಾರತೀಯ ರಕ್ತ ಹೊಂದಿರುವವರು ಯಾರೂ ಬಾಲಕೋಟ್ ವೈಮಾನಿಕ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ನೊಯ್ಡಾದಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉಗ್ರರನ್ನು ಮಟ್ಟಹಾಕಲು ಭಾರತ ನಮ್ಮ ಅವಧಿಯಲ್ಲಿ ಹೊಸ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.
#WATCH PM Narendra Modi in Greater Noida on IAF strikes: Jiski ragon mein Hindustan ka khoon hai, usko shaq hona chahiye kya?... Jo Bharat Maa ki jai bolta hai, usko shaq hona chahiye kya? Ye shaq karne wale log kaun hain? Aise logon ki baaton pe bharosa karoge kya? pic.twitter.com/eCqQUdUxf9
— ANI UP (@ANINewsUP) March 9, 2019
ಆದರೆ ಕೆಲವರು ಬಾಲಾಕೋಟ್ ದಾಳಿಯ ಸಾಕ್ಷಿ ಕೇಳುತ್ತಿದ್ದು, ಇದು ಭಾರತೀಯ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ಮೋದಿ ಗುಡುಗಿದರು. ಭಾರತೀಯ ರಕ್ತ ಹೊಂದಿರುವವರು ಸೇನೆಯಿಂದ ಸಾಕ್ಷಿ ಕೇಳುವುದಿಲ್ಲ ಎಂದು ಪ್ರಧಾನಿ ವಿಪಕ್ಷಗಳನ್ನು ಕಿಚಾಯಿಸಿದರು.
PM Narendra Modi in Greater Noida: Links of attacks and blasts earlier also were connected to Pakistan, but what did the earlier Govt do? They just changed the Home Minister. Now you tell me, in such situations should the home minister be changed or the policy? pic.twitter.com/L5mjF5JW1G
— ANI UP (@ANINewsUP) March 9, 2019
ಮುಂಬೈ ದಾಳಿಯ ನಂತರ ನಮ್ಮ ಸೇನಾಪಡೆಗಳು ಉಗ್ರರ ವಿರುದ್ಧ ಪ್ರತೀಕಾರಕ್ಕೆ ಸಿದ್ಧವಾಗಿದ್ದವು. ಆದರೆ ಹಿಂದಿನ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಸೇನಾಪಡೆಗಳು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮೋದಿ ನುಡಿದರು.