ಈ ಯೋಜನೆಯಿಂದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಸಿಗಲಿದೆ,
ನವದೆಹಲಿ(ಸೆ.25): ಜನತೆಯನ್ನ ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸುವ ‘ಸೌಭಾಗ್ಯ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಿಂದ ದೇಶದ ರೈತರಿಗೆ ಹಾಗೂ ಬಡವರಿಗೆ 24/7 ವಿದ್ಯುತ್ ದೊರಯಲಿದೆ. ದೇಶದಲ್ಲಿ ವಿದ್ಯುತ್ ಕ್ರಾಂತಿಗೆ ಈ ಯೋಜನೆ ನಾಂದಿ ಹಾಡಲಿದೆ
ಯೋಜನೆಯ ವಿವರಗಳು
- ಸೌಭಾಗ್ಯ’ ಯೋಜನೆಯಡಿಪ್ರತಿಮನೆಗೂವಿದ್ಯುತ್
- BPL ಕಾರ್ಡ್ದಾರರಿಗೆಉಚಿತವಿದ್ಯುತ್
- 2019 ಮಾರ್ಚ್ 31ರೊಳಗೆನಿರಂತರವಿದ್ಯುತ್ಪೂರೈಕೆಗುರಿ
- ಪ್ರದೇಶದ 4 ಕೋಟಿಮನೆಗಳಿಗೆವಿದ್ಯುತ್
- 5 ಎಲ್ಇಡಿಬಲ್ಬ್, ಫ್ಯಾನ್, ಬ್ಯಾಟರಿವಿತರಣೆ
- ವ್ಯವಸ್ಥೆಇಲ್ಲದಕಡೆ, ಸೋಲಾರ್ಅಳವಡಿಕೆ
- 16 ಸಾವಿರದ 320 ಕೋಟಿವೆಚ್ಚದಯೋಜನೆ
- ಸರ್ಕಾರದಿಂದಶೇ.70ರಷ್ಟುಬಂಡವಾಳಹೂಡಿಕೆ
- 18 ಸಾವಿರಗ್ರಾಮಗಳಿಗೆವಿದ್ಯುತ್ಸೌಲಭ್ಯ
- ಪೂರೈಕೆಶುಲ್ಕರಹಿತ
ಬಡವರಿಗಾಗಿ ಶ್ರಮಿಸುತ್ತಿದ್ದೇವೆ : ಮೋದಿ
ನಮ್ಮ ಸರ್ಕಾರ ಬಡವರ ಮನೆಗಳಿಗೆ ತೆರಳಿ ವಿದ್ಯುತ್ ನೀಡಲಿದೆ. ವಿದ್ಯುತ್ ನೀಡಲು ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ, ಬಡರಿಗೆ ಸೌಭಾಗ್ಯ ನೀಡಲು ಸಂಕಲ್ಪ ಮಾಡಿದ್ದೇವೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಈ ಯೋಜನೆಯಿಂದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಸಿಗಲಿದೆ, ಈಗಾಗಲೇ ಮುದ್ರಾ ಯೋಜನೆಯಲ್ಲಿ 9 ಕೋಟಿ ಜನರಿಗೆ 3.5 ಲಕ್ಷ ಕೋಟಿ ಸಾಲ ನೀಡಿದ್ದೇವೆ. 310 ರೂಪಾಯಿ ಇದ್ದ ಎಲ್ಇಡಿ ಬಲ್ಬ್ ಬೆಲೆಯನ್ನ 40 ರೂ.ಗೆ ಇಳಿಸಿದ್ದೇವೆ, ನಮ್ಮ ಸರ್ಕಾರ ಪರಿಸರ ಸಂರಕ್ಷಣೆಗೆ ಕಟಿಬದ್ಧವಾಗಿದೆ. ವಿದ್ಯುತ್ ಕ್ಷೇತ್ರದಲ್ಲಿ ಭಾರೀ ಸುಧಾರಣೆಯಾಗಲಿದೆ ಎಂದಿದ್ದಾರೆ.
