ಉತ್ತರ ಪ್ರದೇಶದ ಬೃಹತ್ ರ್ಯಾಲಿನ್ನುದ್ದೇಶಿ ಮಾತನಾಡುತ್ತಾ, ತಾವು ಟೀ ಮಾರಾಟಗಾರರಾಗಿದ್ದಾಗಿನ ಬದುಕನ್ನು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ನೋಟುಗಳ ರದ್ದು ವಿಚಾರವನ್ನು ಪ್ರಸ್ತಾಪಿಸಿ, ಈ ಆಘಾತವು ಕಪ್ಪುಹಣ ಹೊಂದಿದವರಿಗೆ 'ಖಡಕ್ ಚಾಯ್' ಇದ್ದಂತೆ ಎಂದು ವರ್ಣಿಸಿದ್ದಾರೆ.

ಉತ್ತರಪ್ರದೇಶ (ನ.14): 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿ ಕಾಳಧನಿಕರಿಗೆ ನೀಡಿದ ಆಘಾತವನ್ನು ಪ್ರಧಾನಿ ನರೇಂದ್ರ ಮೋದಿ 'ಖಡಕ್ ಚಾಯ್' ಗೆ ಹೋಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತರ ಪ್ರದೇಶದ ಬೃಹತ್ ರ್ಯಾಲಿನ್ನುದ್ದೇಶಿ ಮಾತನಾಡುತ್ತಾ, ತಾವು ಟೀ ಮಾರಾಟಗಾರರಾಗಿದ್ದಾಗಿನ ಬದುಕನ್ನು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ನೋಟುಗಳ ರದ್ದು ವಿಚಾರವನ್ನು ಪ್ರಸ್ತಾಪಿಸಿ, ಈ ಆಘಾತವು ಕಪ್ಪುಹಣ ಹೊಂದಿದವರಿಗೆ 'ಖಡಕ್ ಚಾಯ್' ಇದ್ದಂತೆ ಎಂದು ವರ್ಣಿಸಿದ್ದಾರೆ.

ಭಾರತದ ಆರ್ಥಿಕತೆಯಲ್ಲಿ ಕಪ್ಪುಹಣವನ್ನು ಸಂಪೂರ್ಣವಾಗಿ ನಾಶಪಡಿಸಲು 50 ದಿನಗಳ ಕಾಲಾವಕಾಶ ಕೊಡಿ. ದೇಶದಲ್ಲಿ ಹಳೆ-ಹೊಸ ನೋಟುಗಳ ವಿನಿಮಯ ನಡೆಯುತ್ತಿದೆ. ಇದು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತಿದೆ. ಪ್ರಸ್ತುತ ಆಗುತ್ತಿರುವ ಅನಾನುಕೂಲತೆಯನ್ನು ಜನರು ಸಹಿಸಿಕೊಳ್ಳಬೇಕು ಎಂದು ರ್ಯಾಲಿಯಲ್ಲಿ ಮೋದಿ ವಿನಂತಿಸಿಕೊಂಡಿದ್ದಾರೆ.