ಶ್ರೀಲಂಕಾ ಬಂದಿಳಿದ ಮೋದಿ: ಈಸ್ಟರ್ ಹುತಾತ್ಮರಿಗೆ ನಮನ!
ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ| ಈಸ್ಟರ್ ದಾಳಿ ಬಳಿಕ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ| ಮೋದಿ ಅವರನ್ನು ಸ್ವಾಗತಿಸಿದ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ| ಈಸ್ಟರ್ ದಾಳಿಯಲ್ಲಿ ಮೃತಪಟ್ಟವರಿಗೆ ಮೋದಿ ನಮನ| ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿ ಶಾಂತಿಯ ಗಿಡ ನೆಟ್ಟ ಪ್ರಧಾನಿ|
ಕೊಲಂಬೋ(ಜೂ.09): ಮಾಲ್ಡೀವ್ಸ್ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇಂದು ಶ್ರೀಲಂಕಾಗೆ ಭೇಟಿ ನೀಡಿದ್ದಾರೆ. ಈ ಮೂಲಕ ಈಸ್ಟರ್ ಆತ್ಮಹತ್ಯಾ ಬಾಂಬ್ ದಾಳಿ ಬಳಿಕ ಶ್ರೀಲಂಕಾಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕರಾಗಿದ್ದಾರೆ.
Sri Lanka: Prime Minister Narendra Modi arrives in Colombo, received by Sri Lankan Prime Minister Ranil Wickremesinghe pic.twitter.com/OjRRHRnPf1
— ANI (@ANI) June 9, 2019
ಶ್ರೀಲಂಕಾಗೆ ಬಂದಿಳಿದ ಮೋದಿಯವರನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅಭೂತಪೂರ್ವವಾಗಿ ಸ್ವಾಗತಿಸಿದರು.
Sri Lanka: PM Narendra Modi pays tribute to victims at St Anthony’s Church in Colombo. The church had come under terrorist attack in April this year pic.twitter.com/UTWQz37aBh
— ANI (@ANI) June 9, 2019
ಈ ವೇಳೆ ಕಳೆದ ಏಪ್ರಿಲ್ನಲ್ಲಿ ಈಸ್ಟರ್ ಸಂಡೆ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಗೌರವ ನಮನ ಸಲ್ಲಿಸಿದರು. ಬಾಂಬ್ ಸ್ಫೋಟ ನಡೆದ ಸ್ಥಳಕ್ಕೆ ಹೋಗಿ ಅಲ್ಲಿ ಗಿಡ ನೆಟ್ಟು ಶಾಂತಿ, ಸೌಹಾರ್ದತೆಯ ಸಂದೇಶ ಸಾರಿದರು.
Colombo: Prime Minister Narendra Modi plants a sapling at Presidential Secretariat. Sri Lanka President Maithripala Sirisena also present. pic.twitter.com/CA97JrK4ga
— ANI (@ANI) June 9, 2019
ಇನ್ನು ಶ್ರೀಲಂಕಾ ಪ್ರಧಾನಿ ವಿಕ್ರಮಸಿಂಘೆ, ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ, ಶ್ರೀಲಂಕಾ ವಿಪಕ್ಷ ನಾಯಕರು ಮತ್ತು ತಮಿಳು ಸಂಘಟನೆಗಳ ನಿಯೋಗದೊಂದಿಗೆ ಮಾತುಕತೆ ನಡೆಸಲಿದ್ದಾರೆ.
Colombo: Prime Minister Narendra Modi meets Sri Lanka President Maithripala Sirisena pic.twitter.com/lz8Tqu2K1L
— ANI (@ANI) June 9, 2019
ಇನ್ನು ಮೋದಿ ಇಂದು ಇಂದು ಸಂಜೆ ಶ್ರೀಲಂಕಾದಿಂದ ನೇರವಾಗಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ದೆಹಲಿಗೆ ವಾಪಸ್ಸಾಗಲಿದ್ದಾರೆ.