ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಆಂಬುಲೆನ್ಸ್ ಇಲ್ಲದ ಕಾರಣ, ಬಡ ಕೂಲಿ ಕಾರ್ಮಿಕನೊಬ್ಬ ತನ್ನ ಮಗಳ ಮೃತದೇಹವನ್ನು ಟಿವಿಎಸ್ ನಲ್ಲಿ ಸಾಗಿಸಿದ್ದಾನೆ. ತಿಮ್ಮಪ್ಪ ಎಂಬ ವ್ಯಕ್ತಿ ತನ್ನ ಮಗಳು 20 ವರ್ಷದ ರತ್ನಮ್ಮ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಳು. ಅವಳನ್ನು ಮಧುಗಿರಿ ತಾಲ್ಲೂಕಿನ ಕೊಡುಗೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ. ಆದರೆ ಅಲ್ಲಿ ವೈದ್ಯರೂ ಸಹ ಇಲ್ಲದ ಕಾರಣ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ತುಮಕೂರು(ಫೆ.20): ಹೆಗಲ ಮೇಲೆ ತನ್ನ ಪತ್ನಿಯ ಶವವನ್ನು ಸಾಗಿಸಿದ್ದ ಒಡಿಸ್ಸಾ ಮಾದರಿಯ ಪ್ರಕರಣವೊಂದು ನಮ್ಮ ರಾಜ್ಯದಲ್ಲಿಯೂ ನಡೆದಿದೆ. ಅದೂ ಇಬ್ಬರು ಪ್ರಭಾವಿ ಸಚಿವರ ತವರು ಜಿಲ್ಲೆ, ದಕ್ಷ ಹಾಗೂ ಅಭಿವೃದ್ದಿ ಪರ ಶಾಸಕ ಎಂಬ ಹೆಸರು ಪಡೆದಿರುವ ಕೆ.ಎನ್ ರಾಜಣ್ಣ ಅವರ ಕ್ಷೇತ್ರದಲ್ಲಿಯೇ ನಡೆದಿದೆ.
ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಆಂಬುಲೆನ್ಸ್ ಇಲ್ಲದ ಕಾರಣ, ಬಡ ಕೂಲಿ ಕಾರ್ಮಿಕನೊಬ್ಬ ತನ್ನ ಮಗಳ ಮೃತದೇಹವನ್ನು ಟಿವಿಎಸ್ ನಲ್ಲಿ ಸಾಗಿಸಿದ್ದಾನೆ. ತಿಮ್ಮಪ್ಪ ಎಂಬ ವ್ಯಕ್ತಿ ತನ್ನ ಮಗಳು 20 ವರ್ಷದ ರತ್ನಮ್ಮ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಳು. ಅವಳನ್ನು ಮಧುಗಿರಿ ತಾಲ್ಲೂಕಿನ ಕೊಡುಗೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ. ಆದರೆ ಅಲ್ಲಿ ವೈದ್ಯರೂ ಸಹ ಇಲ್ಲದ ಕಾರಣ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ತನ್ನ ಗ್ರಾಮ ವೀರಾಪುರಕ್ಕೆ ಮಗಳ ಮೃತದೇಹ ಸಾಗಿಸಲು ಆಂಬುಲೆನ್ಸ್ ಇಲ್ಲದ ಕಾರಣ, ಪರಿಚಯಸ್ಥರೊಬ್ಬರ ಸಹಾಯ ಪಡೆದು ಟಿವಿಎಸ್ ಬೈಕ್ನಲ್ಲಿಯೇ ಸಾಗಿಸಿದ್ದಾರೆ.
