ಅಕ್ರಮ ಗಣಿಗಾರಿಕೆ ಕುರಿತು ವರದಿ ನೀಡಿ 6 ವರ್ಷಗಳಾದರೂ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿರಲಿಲ್ಲ. ಈಗ ಮುಂದಿನ ವಿಧಾನಸಭಾ ಎಲೆಕ್ಷನ್​​'ಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಸರ್ಕಾರ ಇದ್ದಕ್ಕಿದ್ದಂತೆ ಮೈ ಕೊಡವಿ ಎದ್ದು ನಿಂತಿದೆ.

ಬೆಂಗಳೂರು(ಎ.20): ಅಕ್ರಮ ಗಣಿಗಾರಿಕೆ ಕುರಿತು ವರದಿ ನೀಡಿ 6 ವರ್ಷಗಳಾದರೂ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಂಡಿರಲಿಲ್ಲ. ಈಗ ಮುಂದಿನ ವಿಧಾನಸಭಾ ಎಲೆಕ್ಷನ್​​'ಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಸರ್ಕಾರ ಇದ್ದಕ್ಕಿದ್ದಂತೆ ಮೈ ಕೊಡವಿ ಎದ್ದು ನಿಂತಿದೆ.

ಗಣಿ ಕಳ್ಳರ ವಲಯದಲ್ಲಿ ಶುರುವಾಗಿದೆ ಕಂಪನ

ಗಣಿ ಕಳ್ಳರಿಗೆ ಚುರುಕು ಮುಟ್ಟಿಸಲು ಸರ್ಕಾರ ಮುಂದಾಗಿದೆ. ಲೋಕಾಯುಕ್ತ ಸಂತೋಷ್​ ಹೆಗ್ಡೆ ಕೊಟ್ಟ ವರದಿ ಆಧರಿಸಿ ಕ್ರಮ ಕೈಗೊಳ್ಳಲು ಸಚಿವ ಎಚ್.ಕೆ.ಪಾಟೀಲ್​ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ನಿರಂತರ ಸಭೆ ನಡೆಸುತ್ತಿದೆ.

ಇದು ಗಣಿ ಕಳ್ಳರ ವಲಯದಲ್ಲಿ ನಡುಕ ಹುಟ್ಟಿಸಿದೆ.

ಸೂಕ್ತ ದಾಖಲೆಗಳಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾದರೂ ಅಧಿಕಾರಿಗಳೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಚಾರ್ಜ್​ಶೀಟ್​ನಲ್ಲಿ ದಾಖಲಾಗಿರುವ ಎಲ್ಲಾ ಆರೋಪಿಗಳಿಂದ ಆಸ್ತಿ ಜಫ್ತಿ ಮಾಡಲು ಎಚ್​.ಕೆ.ಪಾಟೀಲ್​ ಕಾನೂನು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ಲೋಕಾಯುಕ್ತ ವರದಿಯಲ್ಲಿ ವಿಶೇಷವಾಗಿ ನಮೂದಿಸಿರುವ ವ್ಯಕ್ತಿಗಳ ಆಸ್ತಿಗಳನ್ನು ಜಫ್ತಿ ಮಾಡಲು ಸರ್ಕಾರ ಮುಂದಾಗಿದೆ.

ಇನ್ನೂ ಜೆ.ಎಸ್​.ಡಬ್ಲ್ಯೂನಿಂದ ಮೈಸೂರ್​ ಮಿನರಲ್ಸ್​ಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು. ಹೀಗಾಗಿ ನಷ್ಟ ವಸೂಲಿ ಮಾಡುವ ಜವಾಬ್ದಾರಿಯೂ ಎಂ.ಎಂ.ಎಲ್​.ಮೇಲಿತ್ತು. ಈಗ ಜೆ.ಎಸ್​.ಡಬ್ಲ್ಯೂನಿಂದ ಬಾಕಿ ವಸೂಲು ಮಾಡಲು ಸಿವಿಲ್​ ಸೂಟ್​ ಕೂಡ ಹಾಕಿದೆ.

ಒಟ್ಟಿನಲ್ಲಿ ಈಗಲಾದರೂ ಸರ್ಕಾರ ಗಣಿ ಕಳ್ಳರಿಗೆ ಬಿಸಿ ಮುಟ್ಟಿಸಲು ಮುಂದಾಗಿರೋದು ಶ್ಲಾಘನೀಯ. ಆದಷ್ಟು ಬೇಗ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ.

ವರದಿ: ಜಿ.ಮಹಾಂತೇಶ್​, ಸುವರ್ಣನ್ಯೂಸ್