ವಸಂತನಗರದಲ್ಲಿ ರಾತ್ರೋ ರಾತ್ರಿ ಬಿಬಿಎಂಪಿಯಿಂದ ದೇವಸ್ಥಾನ ಮತ್ತು ಚರ್ಚ್ ಧ್ವಂಸಮಾಡಿರುವುದನ್ನು ಖಂಡಿಸಿ ಅಲ್ಲಿನ ಸ್ಥಳೀಯರು ನಿನ್ನೆ ಅಹೋರಾತ್ರಿ ಧರಣಿ ನಡೆಸಿದರು.

ಬೆಂಗಳೂರು(ಮೇ.14): ವಸಂತನಗರದಲ್ಲಿ ರಾತ್ರೋ ರಾತ್ರಿ ಬಿಬಿಎಂಪಿಯಿಂದ ದೇವಸ್ಥಾನ ಮತ್ತು ಚರ್ಚ್ ಧ್ವಂಸಮಾಡಿರುವುದನ್ನು ಖಂಡಿಸಿ ಅಲ್ಲಿನ ಸ್ಥಳೀಯರು ನಿನ್ನೆ ಅಹೋರಾತ್ರಿ ಧರಣಿ ನಡೆಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾತ್ರಿ ಇಡೀ ದೇವಸ್ಥಾನ ಧ್ವಂಸಗೊಳಿಸಿದ ಸ್ಥಳದಲ್ಲೇ ಧರಣಿ ನಡೆಸಿದರು. ಈ ವೇಳೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ನಮ್ಮ ಹೋರಾಟ ಮುಂದುವರಿಯುತ್ತದೆ. ಕಳೆದ 30 ವರ್ಷದಿಂದ ಈ ದೇವಸ್ಥಾನ ಇತ್ತು. ಆದರೆ ನಿನ್ನೆ ಏಕಾಏಕಿ ಬಿಬಿಎಂಪಿ ಅಧಿಕಾರಿಗಳು ದೇವಸ್ಥಾನವನ್ನು ಕೆಡವಿದ್ದಾರೆ. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಸೋಮವಾರ ಬಿಬಿಎಂಪಿ ಕಚೇರಿಗೂ ಸಹ ಮುತ್ತಿಗೆ ಹಾಕುತ್ತೇವೆ. ಅದಕ್ಕೂ ಜಗ್ಗದೇ ಹೋದರೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ