ರೈಲಿನ ಒಂದೆರಡು ಬೋಗಿಗಳು ಹಳಿ ತಪ್ಪುತ್ತವೆ, ಆದರೆ ಒಮ್ಮೆಗೆ 14 ಬೋಗಿಗಳು ಹಳಿತಪ್ಪಿರುವುದು ಸಂಶಯಗಳನ್ನು ಹುಟ್ಟುಹಾಕಿದೆ. ರೈಲ್ವೇಹಳಿಯಲ್ಲಿ ಸಮಸ್ಯೆಯಿರುವುದಿಂದ ಈ  ರೀತಿ ಆಗಿದೆಯೋ ಅಥವಾ ರೈಲ್ವೇ ಇಲಾಖೆಯ ಹೆಸರನ್ನು ಕೆಡಿಸಲು ಈ ರೀತಿ ಮಾಡಲಾಗಿದೆಯೋ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಜೋಷಿ ಆಗ್ರಹಿಸಿದ್ದಾರೆ

ನವದೆಹಲಿ (ನ.20): ನೂರಕ್ಕಿಂತಲೂ ಹೆಚ್ಚು ಜೀವಗಳನ್ನು ಬಲಿತೆಗೆದು ಕೊಂಡಿರುವ ಪಾಟ್ನಾ-ಇಂದೋರ್ ರೈಲು ದುರಂತದ ಹಿಂದೆ ಕೇಂದ್ರ ಸರ್ಕಾರದ ಹೆಸರು ಕೆಡಿಸುವ ಷಡ್ಯಂತ್ರವಿರಬಹುದೆಂದು ಆರೋಪಿಸಿರುವ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ ಜೋಷಿ, ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ರೈಲಿನ ಒಂದೆರಡು ಬೋಗಿಗಳು ಹಳಿ ತಪ್ಪುತ್ತವೆ, ಆದರೆ ಒಮ್ಮೆಗೆ 14 ಬೋಗಿಗಳು ಹಳಿತಪ್ಪಿರುವುದು ಸಂಶಯಗಳನ್ನು ಹುಟ್ಟುಹಾಕಿದೆ. ರೈಲ್ವೇಹಳಿಯಲ್ಲಿ ಸಮಸ್ಯೆಯಿರುವುದಿಂದ ಈ ರೀತಿ ಆಗಿದೆಯೋ ಅಥವಾ ರೈಲ್ವೇ ಇಲಾಖೆಯ ಹೆಸರನ್ನು ಕೆಡಿಸಲು ಈ ರೀತಿ ಮಾಡಲಾಗಿದೆಯೋ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಜೋಷಿ ಏಎನ್’ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಘಟನೆಗೆ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿರುವ ಜೋಷಿ, ರೈಲ್ವೇ ಹಳಿಗಳಲ್ಲಿ ತಾಂತ್ರಿಕ ಸಮಸ್ಯೆಗಳಿದ್ದರೆ ಸರ್ಕಾರ ಅದನ್ನು ತಕ್ಷಣ ಸರಿಪಡಿಸಬೇಕೆಂದು ಅವರು ಹೇಳಿದ್ದಾರೆ.