ಮೈಸೂರು (ಸೆ.22): ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಮಹಾಮಾರಿ ಡೆಂಘೀ ನರ್ತನ ಜೋರಾಗಿದೆ. ಪರಿಣಾಮ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದೇ ಬೆಡ್ನಲ್ಲಿ ಮೂರು ಮೂರು-ಮಕ್ಕಳು ಚಿಕಿತ್ಸೆ ಪಡೆಯುವ ದುಸ್ಥಿತಿ ಎದುರಾಗಿದೆ.
ಕಳೆದ ಒಂದುವಾರದಿಂದ ನಗರ ಹಾಗು ಜಿಲ್ಲೆಯಾದ್ಯಂತ ಡೆಂಘೀ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಪರಿಣಾಮ, ಬೆಡ್ ವ್ಯವಸ್ಥೆಯಿಲ್ಲದೇ ರೋಗಿಗಳು ಒಂದೇ ಬೆಡ್ನಲ್ಲಿ ಮೂರು ಮೂರು ಮಂದಿ ಚಿಕಿತ್ಸೆ ಪಡೆಯಬೇಕಾದ ದುಸ್ಥಿತಿ ಎದುರಾಗಿದೆ. ಇಷ್ಟಾದರೂ, ಇವರ ಗೋಳನ್ನ ಕೇಳುವವರು ಯಾರೂ ಇಲ್ಲದಾಗಿದ್ದಾರೆ.
