Asianet Suvarna News Asianet Suvarna News

ರದ್ದಾದ ಮಹಾ ಮೖತ್ರಿ ಸಮಾವೇಶ

ಬಿಜೆಪಿಯನ್ನು 2019ರ ಲೋಕಸಭೆ ಚುನಾವಣೆಯಲ್ಲಿ ಮಣಿಸುವ ಉದ್ದೇಶದಿಂದ ರಚಿಸಲು ಉದ್ದೇಶಿಸಲಾಗಿರುವ ಮಹಾಮೈತ್ರಿಕೂಟದ ನ.22ರ ದಿಲ್ಲಿ ಸಮಾವೇಶ ರದ್ದಾಗಿದೆ.
 

Oppositions conclave in Delhi postponed
Author
Bengaluru, First Published Nov 20, 2018, 10:43 AM IST

ಕೋಲ್ಕತಾ: ಬಿಜೆಪಿಯನ್ನು 2019ರ ಲೋಕಸಭೆ ಚುನಾವಣೆಯಲ್ಲಿ ಮಣಿಸುವ ಉದ್ದೇಶದಿಂದ ರಚಿಸಲು ಉದ್ದೇಶಿಸಲಾಗಿರುವ ಮಹಾಮೈತ್ರಿಕೂಟದ ನ.22ರ ದಿಲ್ಲಿ ಸಮಾವೇಶ ರದ್ದಾಗಿದೆ.

ಕೂಟ ರಚನೆ ಸಂಬಂಧ ದೇಶಾದ್ಯಂತ ಸಂಚರಿಸಿ ವಿವಿಧ ಪಕ್ಷಗಳ ನಾಯಕರನ್ನು ಭೇಟಿ ಮಾಡುತ್ತಿರುವ ತೆಲುಗುದೇಶಂ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಸೋಮವಾರ ಕೋಲ್ಕತಾದಲ್ಲಿ ತೃಣಮೂಲ ಕಾಂಗ್ರೆಸ್‌ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದರು.

ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನ.22ರ ಮಹಾಮೈತ್ರಿಕೂಟದ ಸಮಾವೇಶ ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಶೀಘ್ರ ಘೋಷಿಸಲಾಗುತ್ತದೆ. ಈಗ ವಿಧಾನಸಭೆ ಚುನಾವಣೆಗಳಲ್ಲಿ ವಿವಿಧ ನಾಯಕರು ಕಾರ್ಯತತ್ಪರರಾಗಿರುವ ಕಾರಣ ಸಮಾವೇಶ ಮುಂದೂಡಿಕೆಯಾಗಿದೆ. ಆದರೆ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುನ್ನವೇ ಸಮಾವೇಶ ನಡೆಸಲಾಗುತ್ತದೆ’ ಎಂದರು.

ಇದೇ ವೇಳೆ ಬಿಜೆಪಿ ವಿರೋಧಿ ಕೂಟದಲ್ಲಿ ಪರಸ್ಪರ ಕೈಜೋಡಿಸಲು ಉಭಯ ನಾಯಕರು ಸಹಮತ ವ್ಯಕ್ತಪಡಿಸಿದರು.

Follow Us:
Download App:
  • android
  • ios