‘ನಾವು ಪಾಕಿಸ್ತಾನ, ಬಾಂಗ್ಲಾದೇಶದೊಂದಿಗೆ ನಮ್ಮ ನದಿ ನೀರು ಹಂಚಿಕೊಳ್ಳುತ್ತೇವೆ. ಹೀಗಿರುವಾಗ, ನಮ್ಮ ರಾಜ್ಯಗಳೊಳಗೆ ಅದನ್ನು ಯಾಕೆ ಮಾಡಲು ಸಾಧ್ಯವಿಲ್ಲ. ಕಾವೇರಿ ಜಲ ಮಂಡಳಿ ರಚನೆಗೆ ವಿಳಂಬ ಅಸಮರ್ಥತೆ ಕಾರಣವಲ್ಲ, ತುಚ್ಛ ರಾಜಕಾರಣವೇ ಅದಕ್ಕೆ ಕಾರಣ. ಕರ್ನಾಟಕದ ಕುರ್ಚಿಯ ಮೇಲೆ ಕಣ್ಣಿಟ್ಟು ಸಂಗೀತ ಕುರ್ಚಿ ಆಟ ಆಡಲಾಗುತ್ತಿದೆ’ ಎಂದು ಕಮಲ್‌ ಟ್ವೀಟ್‌ ಮಾಡಿದ್ದಾರೆ.
ನವದೆಹಲಿ(ಮಾ.23): ಕಾವೇರಿ ಜಲ ಮಂಡಳಿ ರಚನೆ ವಿಳಂಬದ ಬಗ್ಗೆ ತಮಿಳುನಾಡಿನ ನಟ ಕಂ ರಾಜಕಾರಣಿ ಕಮಲ್ ಹಾಸನ್, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ನಾವು ಪಾಕಿಸ್ತಾನ, ಬಾಂಗ್ಲಾದೇಶದೊಂದಿಗೆ ನಮ್ಮ ನದಿ ನೀರು ಹಂಚಿಕೊಳ್ಳುತ್ತೇವೆ. ಹೀಗಿರುವಾಗ, ನಮ್ಮ ರಾಜ್ಯಗಳೊಳಗೆ ಅದನ್ನು ಯಾಕೆ ಮಾಡಲು ಸಾಧ್ಯವಿಲ್ಲ. ಕಾವೇರಿ ಜಲ ಮಂಡಳಿ ರಚನೆಗೆ ವಿಳಂಬ ಅಸಮರ್ಥತೆ ಕಾರಣವಲ್ಲ, ತುಚ್ಛ ರಾಜಕಾರಣವೇ ಅದಕ್ಕೆ ಕಾರಣ. ಕರ್ನಾಟಕದ ಕುರ್ಚಿಯ ಮೇಲೆ ಕಣ್ಣಿಟ್ಟು ಸಂಗೀತ ಕುರ್ಚಿ ಆಟ ಆಡಲಾಗುತ್ತಿದೆ’ ಎಂದು ಕಮಲ್ ಟ್ವೀಟ್ ಮಾಡಿದ್ದಾರೆ.
