ಇದೇ ತಿಂಗಳ 10ರಂದು ನಡೆಯಲಿರುವ ಟಿಪ್ಪು ಜಯಂತಿ ವಿರೋಧಿಸಿ ಒನಕೆ ಚಳವಳಿ ನಡೆಸಲು ಕಳೆದ ಒಂದು ವಾರದಿಂದ ಕರಪತ್ರ ಹಂಚಲಾಗಿದೆ. ಇನ್ನು ಒನಕೆ ಚಳವಳಿ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರಗಳ ಒಳಬರುವ ಎಲ್ಲ  ಪ್ರವೇಶ ನಿಷೇಧ ಮಾಡಲಾಗಿದೆ. 

ಚಿತ್ರದುರ್ಗ(ಸೆ.02): ಟಿಪ್ಪು ಜಯಂತಿ ವಿರೋಧಿಸಿ ಒನಕೆ ಚಳವಳಿಗೆ ಕೋಟೆನಾಡಿನಲ್ಲಿ ಜಿಲ್ಲಾಡಳಿತ ಮಾತ್ರ ಬಿಲ್​​ಕುಲ್​ ಅವಕಾಶ ಕೊಡಲ್ಲ ಅಂತಿದೆ. ಇದಕ್ಕೆ ಕಾರಣ ನೋಡೋದಕ್ಕೆ ಹೋದರೆ ಅಚ್ಚರಿಯಾಗುತ್ತೆ. ಚಿತ್ರದುರ್ಗ ಪೊಲೀಸರಿಗೆ ಒನಕೆ ಒಂದು ಆಯುಧವಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ಕಾರಣಕ್ಕೆ ಚಳವಳಿಗೆ ಅನುಮತಿ ನೀಡುವುದಿಲ್ಲ ಎಂದು ಪ್ರತಿಭಟನಾಕಾರಿಗೆ ಹೇಳಿದ್ದಾರಂತೆ. ಇದೇ ಕಾರಣಕ್ಕೆ ಪೊಲೀಸರು ಬಿಜೆಪಿ ಹಾಗೂ ಭಜರಂಗ ದಳದ ಕೆಲವು ಮುಖಂಡರ ಮನೆಗಳಲ್ಲಿ ಓನಕೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದೇ ತಿಂಗಳ 10ರಂದು ನಡೆಯಲಿರುವ ಟಿಪ್ಪು ಜಯಂತಿ ವಿರೋಧಿಸಿ ಒನಕೆ ಚಳವಳಿ ನಡೆಸಲು ಕಳೆದ ಒಂದು ವಾರದಿಂದ ಕರಪತ್ರ ಹಂಚಲಾಗಿದೆ. ಇನ್ನು ಒನಕೆ ಚಳವಳಿ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರಗಳ ಒಳಬರುವ ಎಲ್ಲ ಪ್ರವೇಶ ನಿಷೇಧ ಮಾಡಲಾಗಿದೆ. 

ಪ್ರತಿಭಟನೆ ತಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್​ ಇಲಾಖೆ ಸಜ್ಜಾಗಿದೆ. ಬೆಳಗ್ಗೆ 10.30ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ಆರಂಭವಾಗುವ ಸಾಧ್ಯತೆ ಇದೆ. ನಿರ್ಬಂಧದ ನಡುವೆ ನಡೆಯುತ್ತಂತೆ ಪ್ರತಿಭಟನೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವರನ್ನು ಬಂಧಿಸಲಾಗಿದೆ.