ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಅಡಳಿತ ಯಂತ್ರ ಚುರುಕುಗೊಂಡು ಗ್ರಾಮದಲ್ಲಿ ಬೋರ್'ವೆಲ್ ಕೊರೆಸಿ ನೀರು ನೀಡಲು ಮುಂದಾಗಿದೆ.

ಶಿವಮೊಗ್ಗ (ಮಾ.19): ಶಿವಮೊಗ್ಗ ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಲಕ್ಕಿನಕೊಪ್ಪ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸುವರ್ಣ ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು.

Add Asianetnews Kannada as a Preferred SourcegooglePreferred

ವರದಿ ಪ್ರಸಾರದ ಬೆನ್ನಲ್ಲೇ ಎಚ್ಚೆತ್ತ ಅಡಳಿತ ಯಂತ್ರ ಚುರುಕುಗೊಂಡು ಗ್ರಾಮದಲ್ಲಿ ಬೋರ್'ವೆಲ್ ಕೊರೆಸಿ ನೀರು ನೀಡಲು ಮುಂದಾಗಿದೆ.

ಅದರೆ 2 ಬೋರ್'ವೆಲ್'ಗಳನ್ನು ಕೊರೆಯಿಸಿದರೂ ನೀರು ಬರಲಿಲ್ಲ. ಆದರೂ ಪ್ರಯತ್ನ ಬಿಡದ ಅಧಿಕಾರಿಗಳು ಗ್ರಾಮದ ಕೆರೆಯಂಗಳದಲ್ಲಿ ಮೂರನೇ ಬೋರ್'ವೊಂದನ್ನು ಕೊರೆಯಿಸುತ್ತಿದ್ದಂತೆ ಕೇವಲ 270 ಅಡಿ ಆಳದಲ್ಲಿ ನೀರು ಸಿಕ್ಕಿತು.

ಈ ಮೂಲಕ ಬಾಯಾರಿದ ಜನ - ಜಾನುವಾರುಗಳ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇದಕ್ಕೆಲ್ಲ ಕಾರಣವಾದ ಸುವರ್ಣನ್ಯೂಸ್'ನ ಪ್ರಯತ್ನಕ್ಕೆ ಗ್ರಾಮಸ್ಥರು ಹೃದಯತುಂಬಿ ಧನ್ಯವಾದಗಳನ್ನು ಅರ್ಪಿಸಿದರು.