Asianet Suvarna News Asianet Suvarna News

ರಾಹುಲ್ ಒಂದ್ಸಲ ಬಂದ್ಹೋಗಿ ಅಂತಾ ಆರ್‌ಎಸ್‌ಎಸ್‌?: ಇಲ್ವಲ್ಲಾ ಅಂತಿದೆ ಕಾಂಗ್ರೆಸ್!

ರಾಹುಲ್ ಗಾಂಧಿ ಕರೆದಿಲ್ಲ ಆರ್‌ಎಸ್‌ಎಸ್‌! ವೇಟ್ ಆ್ಯಂಡ್ ಸೀ ಎಂದ ಕಾಂಗ್ರೆಸ್! ನವದೆಹಲಿಯಲ್ಲಿ ಸಂಘದ ವಿಚಾರ ಸಂಕೀರಣ! ರಾಹುಲ್ ಗಾಂಧಿಗೆ ಆಹ್ವಾನ ನೀಡಿದೆಯಾ ಆರ್‌ಎಸ್‌ಎಸ್‌! ಅಧಿಕೃತ ಆಹ್ವಾನ ಬಂದಾಗ ಯೋಚಿಸುವುದಾಗಿ ಕಾಂಗ್ರೆಸ್ ಪ್ರತಿಕ್ರಿಯೆ

No RSS invite to Rahul yet, will respond when that comes
Author
Bengaluru, First Published Aug 28, 2018, 11:13 AM IST | Last Updated Sep 9, 2018, 8:59 PM IST

ನವದೆಹಲಿ(ಆ.28): ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಹ್ವಾನ ನೀಡಲಾಗಿದೆ ಎಂಬ ಸುದ್ದಿ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಮುಂದಿನ ತಿಂಗಳು ನವದೆಹಲಿಯಲ್ಲಿ ಆರ್‌ಎಸ್‌ಎಸ್‌ ವಿಚಾರ ಸಂಕೀರಣ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಆದರೆ ಆರ್‌ಎಸ್‌ಎಸ್‌ನಿಂದ ಇಂತಹ ಯಾವುದೇ ಆಹ್ವಾನ ಬಂದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದ್ದು, ಒಂದು ವೇಳೆ ಆರ್‌ಎಸ್‌ಎಸ್‌ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿದರೆ ಈ ಕುರಿತು ನಿಧರ್ಧರಿಸಲಾಗುವುದು ಎಂದು ತಿಳಿಸಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಕೇವಲ ಊಹಾಪೋಹಗಳ ಮೇಲೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಆರ್‌ಎಸ್‌ಎಸ್‌ನಿಂದ ಅಧಿಕೃತ ಆಹ್ವಾನ ಬಂದರೆ ಈ ಕುರಿತು ಚರ್ಚೆ ಮಾಡಬಹುದು ಎಂದು ಅವರು ಸ್ಪಷ್ಟಪಡಿಸಿದರು.

ಈ ವಿಚಾರ ಸಂಕೀರಣದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಪಾಲ್ಗೊಳ್ಳಲಿದ್ದು, ಇದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿಪಿಎಂ ಮುಖ್ಯಸ್ಥ  ಸೀತಾರಾಂ ಯೆಚೂರಿ ಅವರಿಗೆ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತಿದೆ.

Latest Videos
Follow Us:
Download App:
  • android
  • ios