Asianet Suvarna News Asianet Suvarna News

ನಿಯಮ ಉಲ್ಲಂಘಿಸಿದ ಶಾಸಕರ ವಿರುದ್ಧ ಕ್ರಮ ಯಾಕಿಲ್ಲ?

ನವೆಂಬರ್ 27 ರಿಂದ 30ರವರೆಗೆ ಬಂಡಿಪುರದ ಕಾಡಿನಲ್ಲಿರುವ ಬೇಲದಕುಪ್ಪೆ ಮಹದೇಶ್ವರ ಜಾತ್ರೆ ನಡೆಯುತ್ತದೆ. ಈ ವೇಳೆ ಜಾತ್ರೆಗಾಗಿ ಬರುವ ಜನರು ಕಾಡಿನಲ್ಲೇ ಅಡುಗೆ ಮಾಡಿ ಪರಿಸರವನ್ನು ಹಾಳು ಮಾಡುತ್ತಾರೆ ಎಂಬ ಕಾರಣಕ್ಕೆ ಖಾಸಗಿ ವಾಹನ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಭಕ್ತರಿಗೇನೂ ತೊಂದರೆಯಾಗಿರಲಿಲ್ಲ.

No Action Against MLA Who Violated Rules

ಮೈಸೂರು (ನ.30): ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ನಿಯಮ ಉಲ್ಲಂಘಿಸಿ ಪ್ರವೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇಶ್ವರಸ್ವಾಮಿ ದೇವಸ್ಥಾನ ಸಮಿತಿಗೆ ನೋಟಿಸ್ ನೀಡಲಾಗಿದೆ.

ಈ ಸಮಿತಿ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೆ, ಬ್ಯಾರಿಕೆಡ್ ಕಿತ್ತು ಶಾಸಕ ಚಿಕ್ಕಮಾದುಗೆ ಯಾವುದೇ ನೋಟೀಸ್ ನೀಡದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಬಲಾಢ್ಯರನ್ನು ಬಿಟ್ಟು ಸಣ್ಣಪುಟ್ಟವರ ಮೇಲೆ ಕ್ರಮಕ್ಕೆ ಮುಂದಾಗಿದೆ ಎಂಬ ಅನುಮಾನ ಕಾಡತೊಡಗಿದೆ.

ನವೆಂಬರ್ 27 ರಿಂದ 30ರವರೆಗೆ ಬಂಡಿಪುರದ ಕಾಡಿನಲ್ಲಿರುವ ಬೇಲದಕುಪ್ಪೆ ಮಹದೇಶ್ವರ ಜಾತ್ರೆ ನಡೆಯುತ್ತದೆ. ಈ ವೇಳೆ ಜಾತ್ರೆಗಾಗಿ ಬರುವ ಜನರು ಕಾಡಿನಲ್ಲೇ ಅಡುಗೆ ಮಾಡಿ ಪರಿಸರವನ್ನು ಹಾಳು ಮಾಡುತ್ತಾರೆ ಎಂಬ ಕಾರಣಕ್ಕೆ ಖಾಸಗಿ ವಾಹನ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಭಕ್ತರಿಗೇನೂ ತೊಂದರೆಯಾಗಿರಲಿಲ್ಲ.

ಈ ನಡುವೆ ನವೆಂಬರ್ 27ರ ರಾತ್ರಿ ಶಾಸಕ ಚಿಕ್ಕಮಾದು, ಸುಮಾರು 300ಕ್ಕೂ ಹೆಚ್ಚು ಬೆಂಬಲಿಗರನ್ನು ಕರೆತಂದು ಬ್ಯಾರಿಕೆಡ್’ಗಳನ್ನು ಕಿತ್ತೊಗೆದು ತಮ್ಮ ಖಾಸಗೀ ಕಾರಿನಲ್ಲೇ ಅರಣ್ಯ ಪ್ರವೇಶ ಮಾಡಿದ್ದಾರೆ. ಶಾಸಕರಾಗಿದ್ದು ಸರ್ಕಾರದ ಕಾನೂನನ್ನು ಗಾಳಿಗೆ ತೂರಿದ್ದಾರೆ. ಈ ವೇಳೆ ಚಿಕ್ಕಮಾದು ಅಧಿಕಾರಿಗಳ ಜತೆ ವಾಗ್ವಾದವನ್ನು ನಡೆಸಿದ್ದರು.

Follow Us:
Download App:
  • android
  • ios