ಸ್ವಯಂಘೋಷಿತ ದೇವಮಾನವ ನಿತ್ಯಾನಂದಗೆ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಮದುರೈನ ಆಧೀನಂ ಪೀಠ ಪ್ರವೇಶಕ್ಕೆ ಮದ್ರಾಸ್​ ಹೈಕೋರ್ಟ್​ ನಿಷೇಧ ಹೇರಿದೆ.

ಬೆಂಗಳೂರು(ಅ.12): ಸ್ವಯಂಘೋಷಿತ ದೇವಮಾನವ ನಿತ್ಯಾನಂದಗೆ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಮದುರೈನ ಆಧೀನಂ ಪೀಠ ಪ್ರವೇಶಕ್ಕೆ ಮದ್ರಾಸ್​ ಹೈಕೋರ್ಟ್​ ನಿಷೇಧ ಹೇರಿದೆ.

ನಿತ್ಯಾನಂದ ಹಾಗೂ ಆತನ ಭಕ್ತಾಧಿಗಳಿಗೆ ಮದುರೈನ ಆಧೀನಂ ಪೀಠ ಪ್ರವೇಶಕ್ಕೆ ಮದ್ರಾಸ್‌ ಹೈಕೋರ್ಟ್‌ ನಿರ್ಭಂದ ಹೇರಿದೆ. ಅಲ್ಲದೆ ಮಠ ಪ್ರವೇಶಿಸಲು ರಕ್ಷಣೆ ನೀಡಬೇಕು ಎಂದು ನಿತ್ಯಾನಂದ ಸಲ್ಲಿಸಿದ್ದ ಅರ್ಜಿಯನ್ನೂ ಕೋರ್ಟ್ ವಜಾಗೊಳಿಸಿದೆ. ಇದೇ ವಿಚಾರವಾಗಿ ನವೆಂಬರ್‌ 8ಕ್ಕೆ ಮತ್ತೆ ನಡೆಯಲಿದೆ ವಿಚಾರಣೆ ನಡೆಯಲಿದೆ.