Asianet Suvarna News Asianet Suvarna News

RSS ಬಗ್ಗೆ ಗುಪ್ತ​ಚರ ಮಾಹಿ​ತಿ ಕೋರಿದ ಮುಖ್ಯಮಂತ್ರಿ ನಿತೀಶ್!

ಮುಖ್ಯಮಂತ್ರಿ ಇದೀಗ ತಮ್ಮ ಮಾಹಿತಿಗಾಗಿ ಗುಪ್ತಚರ ಇಲಾಖೆ ಮೊರೆ ಹೋಗಿದ್ದಾರೆ. ಸಿಎಂ ಗುಪ್ತಚರ ಇಲಾಖೆಯಿಂದ ಬಯಸಿದ ಮಾಹಿತಿ ಏನು?

Nitish Kumar Wants information About RSS
Author
Bengaluru, First Published Jul 18, 2019, 11:01 AM IST

ಪಟನಾ [ಜು.18]: ಕೇಂದ್ರದಲ್ಲಿ ಸರ್ಕಾ​ರ​ ರಚನೆ ವೇಳೆ ಮಿತ್ರ​ಪ​ಕ್ಷ ಜೆಡಿಯು ಅನ್ನು ನಿರ್ಲ​ಕ್ಷಿ​ಸಿದ ಪರಿ​ಣಾಮ ಜೆಡಿಯು ವರಿಷ್ಟಹಾಗೂ ಬಿಹಾರ ಸಿಎಂ ನಿತೀಶ್‌ ಕುಮಾ​ರ್‌ ತಮ್ಮ ಬೆಂಬಲ ವಾಪಸ್‌ ಪಡೆದು ಎನ್‌​ಡಿ​ಎದಿಂದ ಹೊರಬಂದಿ​ದ್ದರು. 

ಇದೀಗ ಬಿಹಾ​ರ​ದಲ್ಲಿ ಬಿಜೆ​ಪಿಯ ತಾರ್ಕಿಕ ಶಕ್ತಿಯಾಗಿ​ರುವ ಆರ್‌​ಎ​ಸ್‌​ಎಸ್‌ ಮತ್ತು ಅದರ 19 ಪ್ರಮುಖ ವ್ಯಕ್ತಿ​ ಅಥವಾ ಶಾಖೆ​ಗಳು ಮತ್ತು ಅದರ ಚಟು​ವ​ಟಿ​ಕೆ​ಗಳ ಕುರಿತು ಗುಪ್ತ​ಚರ ಮಾಹಿತಿ ಸಂಗ್ರ​ಹಿ​ಸು​ತ್ತಿ​ರು​ವುದು ನಿತೀಶ್‌ ಮತ್ತು ಬಿಜೆಪಿ ಮಧ್ಯದ ಬಿಕ್ಕ​ಟ್ಟನ್ನು ಮತ್ತಷ್ಟು ಜಟಿ​ಲ​ಗೊ​ಳಿಸುವ ಸಾಧ್ಯ​ತೆ​ಗ​ಳಿವೆ.

ಸಿಎಂ ಹುದ್ದೆ ಜತೆಗೆ ಗೃಹ ಇಲಾಖೆ ಹಾಗೂ ಗುಪ್ತ​ಚರ ಇಲಾ​ಖೆ​ಯನ್ನೂ ಹೊಂದಿ​ರುವ ನಿತೀಶ್‌ ಕುಮಾರ್ ಇದೀಗ ಒಂದು ವಾರ​ದೊ​ಳ​ಗಾಗಿ ಈ ಕುರಿತ ಮಾಹಿತಿ ನೀಡು​ವಂತೆ ಹೆಚ್ಚು​ವರಿ ಎಸ್ಪಿ​ಗಳ ಮೂಲಕ ಮಾಹಿತಿ ಕೋರಿ​ದ್ದಾರೆ. 

ಅಲ್ಲದೇ 2017ರಲ್ಲಿ ಅಂದಿನ ಬಿಹಾರ ಸಿಎಂ ಲಾಲೂ ಪ್ರಸಾದ ಯಾದವ್‌ ಕೈಗೊಂಡಿದ್ದ ಆರ್‌​ಎ​ಸ್‌​ಎಸ್‌ ನಿಷೇ​ಧದ ಸಾಧ್ಯ​ತೆ​ಗಳ ಬಗ್ಗೆಯೂ ಚಿಂತನೆ ನಡೆ​ಸಿ​ದ್ದಾರೆ ಎನ್ನ​ಲಾ​ಗಿದ್ದು, ಈ ಮೂಲಕ ರಾಜ್ಯ ಬಿಜೆ​ಪಿಗೆ ಪೆಟ್ಟು ನೀಡಲು ಮುಂದಾ​ಗಿದ್ದಾರೆ.

Follow Us:
Download App:
  • android
  • ios