RSS ಬಗ್ಗೆ ಗುಪ್ತಚರ ಮಾಹಿತಿ ಕೋರಿದ ಮುಖ್ಯಮಂತ್ರಿ ನಿತೀಶ್!
ಮುಖ್ಯಮಂತ್ರಿ ಇದೀಗ ತಮ್ಮ ಮಾಹಿತಿಗಾಗಿ ಗುಪ್ತಚರ ಇಲಾಖೆ ಮೊರೆ ಹೋಗಿದ್ದಾರೆ. ಸಿಎಂ ಗುಪ್ತಚರ ಇಲಾಖೆಯಿಂದ ಬಯಸಿದ ಮಾಹಿತಿ ಏನು?
ಪಟನಾ [ಜು.18]: ಕೇಂದ್ರದಲ್ಲಿ ಸರ್ಕಾರ ರಚನೆ ವೇಳೆ ಮಿತ್ರಪಕ್ಷ ಜೆಡಿಯು ಅನ್ನು ನಿರ್ಲಕ್ಷಿಸಿದ ಪರಿಣಾಮ ಜೆಡಿಯು ವರಿಷ್ಟಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಬೆಂಬಲ ವಾಪಸ್ ಪಡೆದು ಎನ್ಡಿಎದಿಂದ ಹೊರಬಂದಿದ್ದರು.
ಇದೀಗ ಬಿಹಾರದಲ್ಲಿ ಬಿಜೆಪಿಯ ತಾರ್ಕಿಕ ಶಕ್ತಿಯಾಗಿರುವ ಆರ್ಎಸ್ಎಸ್ ಮತ್ತು ಅದರ 19 ಪ್ರಮುಖ ವ್ಯಕ್ತಿ ಅಥವಾ ಶಾಖೆಗಳು ಮತ್ತು ಅದರ ಚಟುವಟಿಕೆಗಳ ಕುರಿತು ಗುಪ್ತಚರ ಮಾಹಿತಿ ಸಂಗ್ರಹಿಸುತ್ತಿರುವುದು ನಿತೀಶ್ ಮತ್ತು ಬಿಜೆಪಿ ಮಧ್ಯದ ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸುವ ಸಾಧ್ಯತೆಗಳಿವೆ.
ಸಿಎಂ ಹುದ್ದೆ ಜತೆಗೆ ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಯನ್ನೂ ಹೊಂದಿರುವ ನಿತೀಶ್ ಕುಮಾರ್ ಇದೀಗ ಒಂದು ವಾರದೊಳಗಾಗಿ ಈ ಕುರಿತ ಮಾಹಿತಿ ನೀಡುವಂತೆ ಹೆಚ್ಚುವರಿ ಎಸ್ಪಿಗಳ ಮೂಲಕ ಮಾಹಿತಿ ಕೋರಿದ್ದಾರೆ.
ಅಲ್ಲದೇ 2017ರಲ್ಲಿ ಅಂದಿನ ಬಿಹಾರ ಸಿಎಂ ಲಾಲೂ ಪ್ರಸಾದ ಯಾದವ್ ಕೈಗೊಂಡಿದ್ದ ಆರ್ಎಸ್ಎಸ್ ನಿಷೇಧದ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಮೂಲಕ ರಾಜ್ಯ ಬಿಜೆಪಿಗೆ ಪೆಟ್ಟು ನೀಡಲು ಮುಂದಾಗಿದ್ದಾರೆ.