ದಾರಿಯಲ್ಲಿ ಹುಡುಗಿ ಸೇರಿದಂತೆ ಮತ್ತೆ ಮೂವರು ಕಾರಿಗೆ ಹತ್ತಿದ್ದಾರೆ. ಹೋಗಬೇಕಾದ ಸ್ಥಳವನ್ನು ಬಿಟ್ಟು ಬೇರೆಡೆ ಕರೆದೊಯ್ದಿದ್ದರು

ಬೆಂಗಳೂರು(ಏ.07): ಊಬರ್​ ಕ್ಯಾಬ್​ನ್ನು ಬುಕ್​ ಮಾಡಿ ಊಬರ್​ ಚಾಲಕನಿಗೆ ನೈಜೀರಿಯನ್​ ಪ್ರಜೆಗಳು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕೆ ಆರ್​ ಪುರಂನಲ್ಲಿ ನಡೆದಿದೆ.

ನೆನ್ನೆ ತಡರಾತ್ರಿ ಚಾಲಕ ಸಂತೋಷ್​ ಹೊಸೂರ್​ ಬಂಡೆ ಬಳಿ ಜೀಫ್​ ಎಂಬ ನೈಜೀರಿಯನ್​ ಪ್ರಜೆಯನ್ನ ಪಿಕ್​ ಅಪ್​ ಮಾಡಿದ್ದ. ನಂತರ ದಾರಿಯಲ್ಲಿ ಹುಡುಗಿ ಸೇರಿದಂತೆ ಮತ್ತೆ ಮೂವರು ಕಾರಿಗೆ ಹತ್ತಿದ್ದಾರೆ. ಹೋಗಬೇಕಾದ ಸ್ಥಳವನ್ನು ಬಿಟ್ಟು ಬೇರೆಡೆ ಕರೆದೊಯ್ದಿದ್ದರು. ಹೀಗೆ ಸುಮಾರು 22 ಕಿಲೋಮೀಟರ್​ ಸುತ್ತಾಡಿಸಿದ್ದಾರೆ. ಅದೂ ಅಲ್ಲದೆ ಕ್ಯಾಬ್​ ನಲ್ಲಿ ಕುಡಿದಿದ್ದು ಅದನ್ನ ಪ್ರಶ್ನಿಸಿದಕ್ಕೆ ಹಲ್ಲೆಯನ್ನ ನಡೆಸಿದರು. ಅದಾದ ಬಳಿಕ ಭಟ್ಟರಹಳ್ಳಿಗೆ ಬಂದು ತಮ್ಮ ಮನೆ ಬಳಿ ಬಂದಾಗ ಕ್ಯಾಬ್​ನ ಸೀಟಿನಲ್ಲಿ ಬಿಯರ್​ಗಳನ್ನು ಚೆಲ್ಲಿದ್ದರೂ ಅದೂ ಅಲ್ಲದೆ ಹಣ ಕೇಳಿದಕ್ಕೆ ಮತ್ತೆ ಹಲ್ಲೆ ನಡೆಸಿ ಅಲ್ಲಿಂದ ಹೊರ ಬಿದ್ದಿದ್ರು. ಈ ಸಂಬಂಧ ಸಂತೋಷ್​ ಕೆ.ಆರ್.​ ಪುರಂ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.