ದೆಹಲಿಯಲ್ಲಿ ಈ ಕುರಿತು ಶಶಿಕಾಂತ್ ದಾಸ್​ ಹೇಳಿಕೆ ನೀಡಿದ್ದು, ಬ್ಯಾಂಕ್​​, ಅಂಚೆ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, 500 ರೂ ಮತ್ತು 1000 ರೂ ನೋಟುಗಳನ್ನು ಬದಲಾವಣೆ ಮಾಡಿಕೊಂಡವರ ಕೈ ಬೆರಳಿಗೆ ಶಾಯಿ ಹಾಕಬೇಕು. 

ದೆಹಲಿ(ನ.15): 500 ರೂ ಮತ್ತು 1000 ರೂ ನೋಟುಗಳ ಬದಲಾವಣೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯುವ ಸಲುವಾಗಿ ಒಂದು ಬೆರಳಿಗೆ ಶಾಯಿ ಹಚ್ಚಲು ಸೂಚನೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸೂಚಿಸಿದ್ದಾರೆ ಎನ್ನಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿಯಲ್ಲಿ ಈ ಕುರಿತು ಶಶಿಕಾಂತ್ ದಾಸ್​ ಹೇಳಿಕೆ ನೀಡಿದ್ದು, ಬ್ಯಾಂಕ್​​, ಅಂಚೆ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, 500 ರೂ ಮತ್ತು 1000 ರೂ ನೋಟುಗಳನ್ನು ಬದಲಾವಣೆ ಮಾಡಿಕೊಂಡವರ ಕೈ ಬೆರಳಿಗೆ ಶಾಯಿ ಹಾಕಬೇಕು. 

ಈ ಮೂಲಕ ಒಬ್ಬರೇ ಹಲವು ಬಾರಿ ನೋಟು ಬದಲಾವಣೆ ಮಾಡುವುದನ್ನು ತಡೆಯಲು ಈ ಕ್ರಮಕ್ಕೆ ಮುಂದಾಗಲಾಗಿದೆ ಎನ್ನಲಾಗಿದೆ. 

ಒಂದು ಕಡೆ ಬ್ಯಾಂಕ್ ಮತ್ತು ಎಟಿಎಂ ಮುಂದೆ ಜನ ಸೇರಿದ್ದು, ಇಂತಹ ಸಂದರ್ಭದಲ್ಲಿ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಬಿಸಿ ತುಪ್ಪದ ಹಾಗೇ ಆಗಿದೆ.