ನಮ್ಮ ಬೆಂಗಳೂರು ಫೌಂಡೇಷನ್'ನಿಂದ ಕೋಳಿವಾಡ ವರದಿ ಪ್ರಸ್ತುತತೆಯ ಬಗ್ಗೆ ಸಂವಾದ

ಬೆಂಗಳೂರು(ಡಿ.09): ನೀರಿಲ್ಲದ ಕೆರೆಗಳನ್ನು ಮೃತ ಕೆರೆಗಳೆಂದು ಘೋಷಿಸಿ ಲೇಔಟ್​​ ನಿರ್ಮಿಸಲು ಅವಕಾಶ ಕೊಟ್ಟಿರುವ ಕೋಳಿವಾಡ ಸಮಿತಿಯ ವರದಿಯ ಪ್ರಸ್ತುತೆಯ ಬಗ್ಗೆ ಇಂದು ಕಬ್ಬನ್​​ ಪಾರ್ಕ್​​ನಲ್ಲಿ ನಾಗರೀಕ ಸಂವಾದ ನಡೆಯಿತು. ಸರ್ಕಾರದ ಉದ್ದೇಶಗಳನ್ನು ಪ್ರಶ್ನಿಸಿ ಬೆಂಗಳೂರನ್ನು ಉಳಿಸಿಕೊಳ್ಳುವ ಮಾರ್ಗೋಪಾಯದ ಬಗ್ಗೆ ಯುನೈಟೆಡ್​​ ಬೆಂಗಳೂರು, ನಮ್ಮ ಬೆಂಗಳೂರು ಫೌಂಡೇಶನ್​​, ಸಿಟಿಝನ್​ ಅ್ಯಕ್ಷನ್​ ಫೋರಂ ಸೇರಿದಂತೆ ಹಲವು ನಾಗರೀಕ ಸಂಘಟನೆಗಳು ಚರ್ಚೆ ನಡೆಸಿದವು. ಸಂಸದ ರಾಜೀವ ಚಂದ್ರಶೇಖರ್, ಸುಪ್ರೀಂ ಕೋರ್ಟ್​ ವಕೀಲ ಸಜ್ಜನ್​ ಪೂವಯ್ಯ, ಸೇರಿದಂತೆ ಹಲವಾರು ಪರಿಸರ ಪ್ರೇಮಿಗಳು, ಸಾಮಾಜಿಕ ಹೋರಾಟಗಾರ, ತಜ್ಞರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.