Asianet Suvarna News Asianet Suvarna News

ಮಣ್ಣಿನಲ್ಲಿ ಸಿಲುಕಿದ ನಂಜನಗೂಡಿನ ನಂಜುಂಡೇಶ್ವರ ಬೃಹತ್ ರಥ!

ಮೈಸೂರು ಜಿಲ್ಲೆಯ ನಂಜನಗೂಡಿನ ಆರಾಧ್ಯದೈವ ಶ್ರೀ ನಂಜುಂಡೇಶ್ವರನ ರಥೋತ್ಸವದ ವೇಳೆ ಅವಘಡ ಸಂಭವಿಸಿದೆ. ಪ್ರಸಿದ್ಧ ಶ್ರೀಕಂಠಸ್ವಾಮಿ ರಥೋತ್ಸವದ ವೇಳೆ ರಥದ ಚಕ್ರ ಮಣ್ಣಿನ ಹೂಳಿನಲ್ಲಿ ಸಿಲುಕಿಕೊಂಡಿದೆ.

nanjanagudu chariot caught in soil

ಮೈಸೂರು(ಎ.07): ಮೈಸೂರು ಜಿಲ್ಲೆಯ ನಂಜನಗೂಡಿನ ಆರಾಧ್ಯದೈವ ಶ್ರೀ ನಂಜುಂಡೇಶ್ವರನ ರಥೋತ್ಸವದ ವೇಳೆ ಅವಘಡ ಸಂಭವಿಸಿದೆ. ಪ್ರಸಿದ್ಧ ಶ್ರೀಕಂಠಸ್ವಾಮಿ ರಥೋತ್ಸವದ ವೇಳೆ ರಥದ ಚಕ್ರ ಮಣ್ಣಿನ ಹೂಳಿನಲ್ಲಿ ಸಿಲುಕಿಕೊಂಡಿದೆ.

ನಂಜನಗೂಡಿನ ಅಂಗಡಿ ಬೀದಿಯಲ್ಲಿ ಈ ಅವಘಡ ಸಂಭವಿಸಿದ್ದು, ಜೆಸಿಬಿ ಹಾಗೂ ಕ್ರೇನ್​​​ ಮೂಲಕ ರಥವನ್ನು ಮೇಲೆತ್ತುವ ಕಾರ್ಯ ಮಾಡಲಾಗ್ತಿದೆ. ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಥ ಸಾಗುವ ಹಾದಿಯಲ್ಲಿ ಮಣ್ಣು ಸಡಿಲಗೊಂಡ ಕಾರಣ, ಬೃಹತ್ ರಥ ಮಣ್ಣಿನ ಹೂಳಿನಲ್ಲಿ ಸಿಲುಕಿಕೊಂಡಿದೆ.

Follow Us:
Download App:
  • android
  • ios