ಮಣ್ಣಿನಲ್ಲಿ ಸಿಲುಕಿದ ನಂಜನಗೂಡಿನ ನಂಜುಂಡೇಶ್ವರ ಬೃಹತ್ ರಥ!
ಮೈಸೂರು ಜಿಲ್ಲೆಯ ನಂಜನಗೂಡಿನ ಆರಾಧ್ಯದೈವ ಶ್ರೀ ನಂಜುಂಡೇಶ್ವರನ ರಥೋತ್ಸವದ ವೇಳೆ ಅವಘಡ ಸಂಭವಿಸಿದೆ. ಪ್ರಸಿದ್ಧ ಶ್ರೀಕಂಠಸ್ವಾಮಿ ರಥೋತ್ಸವದ ವೇಳೆ ರಥದ ಚಕ್ರ ಮಣ್ಣಿನ ಹೂಳಿನಲ್ಲಿ ಸಿಲುಕಿಕೊಂಡಿದೆ.
ಮೈಸೂರು(ಎ.07): ಮೈಸೂರು ಜಿಲ್ಲೆಯ ನಂಜನಗೂಡಿನ ಆರಾಧ್ಯದೈವ ಶ್ರೀ ನಂಜುಂಡೇಶ್ವರನ ರಥೋತ್ಸವದ ವೇಳೆ ಅವಘಡ ಸಂಭವಿಸಿದೆ. ಪ್ರಸಿದ್ಧ ಶ್ರೀಕಂಠಸ್ವಾಮಿ ರಥೋತ್ಸವದ ವೇಳೆ ರಥದ ಚಕ್ರ ಮಣ್ಣಿನ ಹೂಳಿನಲ್ಲಿ ಸಿಲುಕಿಕೊಂಡಿದೆ.
ನಂಜನಗೂಡಿನ ಅಂಗಡಿ ಬೀದಿಯಲ್ಲಿ ಈ ಅವಘಡ ಸಂಭವಿಸಿದ್ದು, ಜೆಸಿಬಿ ಹಾಗೂ ಕ್ರೇನ್ ಮೂಲಕ ರಥವನ್ನು ಮೇಲೆತ್ತುವ ಕಾರ್ಯ ಮಾಡಲಾಗ್ತಿದೆ. ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಥ ಸಾಗುವ ಹಾದಿಯಲ್ಲಿ ಮಣ್ಣು ಸಡಿಲಗೊಂಡ ಕಾರಣ, ಬೃಹತ್ ರಥ ಮಣ್ಣಿನ ಹೂಳಿನಲ್ಲಿ ಸಿಲುಕಿಕೊಂಡಿದೆ.