ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಶಶಿಕುಮಾರ್  ಮೊದಲ ದಿನವೇ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. 

ಬೆಂಗಳೂರು (ಮಾ.15): ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಶಶಿಕುಮಾರ್  ಮೊದಲ ದಿನವೇ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. 

ಪಿರಿಯಾಪಟ್ಟಣ ತಾಲೂಕು ಮುತ್ತೂರು ಗಿರಿಜನ ಆಶ್ರಮ‌ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡಿದ್ದಾರೆ. ಶಾಲೆಯಲ್ಲಿ ಊಟ,‌ ವಸತಿ ವ್ಯವಸ್ಥೆ ಹೇಗಿದೆ ಎಂಬುದನ್ನು  ಪರಿಶೀಲನೆ ನಡೆಸಿದ್ದಾರೆ.  ಕಲಿಕಾ ಪ್ರಗತಿ ಹಿನ್ನಡೆ ಕಂಡ  ಮಕ್ಕಳಿಗೆ ಕನ್ನಡ ಪಾಠ ಮಾಡಿದ್ದಾರೆ. ಮಕ್ಕಳಲ್ಲಿ  ಪ್ರಗತಿ ತರುವಂತೆ  ಶಾಲಾ ಶಿಕ್ಷಕರಿಗೆ ಡಿಸಿ ತಾಕೀತು ಮಾಡಿದ್ದಾರೆ.  ಹುಣಸೂರು ವಿಭಾಗದ ಎಸಿ ನಿತೀಶ್ ಸೇರಿದಂತೆ ತಾಲೂಕು ಅಧಿಕಾರಿಗಳು ಸಾಥ್ ನೀಡಿದ್ದಾರೆ.