ಮಳೆಗೆ ಹಾರಾಟ ಸ್ಥಗಿತ: ಇಂಡಿಗೋ ಪ್ರಯಾಣಿಕರಿಗೆ ಇಡೀ ರಾತ್ರಿ ವಿಮಾನ ವಾಸ| ಮುಂಬೈನಿಂದ ಜೈಪುರಕ್ಕೆ ಹೊರಡಬೇಕಿದ್ದ ವಿಮಾನ

ಮುಂಬೈ[ಸೆ.06]: ಮಳೆಯಿಂದ ಸಂಚಾರ ರದ್ದಾಗಿದ್ದರೂ, ನೂರಾರು ಪ್ರಯಾಣಿಕರನ್ನು ಇಂಡಿಗೋ ಸಂಸ್ಥೆ ಇಡೀ ರಾತ್ರಿ ವಿಮಾನದಲ್ಲೇ ಕೂರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಮಾನಯಾನ ಪ್ರಾಧಿಕಾರ ಈ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ.

ಇಂಡಿಗೋ ವಿಮಾನ ಬುಧವಾರ ರಾತ್ರಿ 7.55ಕ್ಕೆ ಮುಂಬೈನಿಂದ ಜೈಪುರಕ್ಕೆ ಹೊರಡಬೇಕಿತ್ತು. ಆದರೆ ಮಳೆಯಿಂದಾಗಿ ಸಂಚಾರ ವಿಳಂಬವಾಗಿತ್ತು. ಬಳಿಕ ಪ್ರತಿಕೂಲ ಹವಾಮಾನದ ಕಾರಣ ಸಂಚಾರ ರದ್ದುಪಡಿಸಲಾಗಿತ್ತು. ಅಂತಿಮವಾಗಿ ಗುರುವಾರ ಬೆಳಗ್ಗೆ ವಿಮಾನ ಮುಂಬೈನಿಂದ ಸಂಚಾರ ಆರಂಭಿಸಿದೆ.

Scroll to load tweet…
Scroll to load tweet…
Scroll to load tweet…
Scroll to load tweet…

ವಿಮಾನ ಹೀಗೆ 10 ಗಂಟೆ ವಿಳಂಬವಾದರೂ, ಪ್ರಯಾಣಿಕರನ್ನು ವಿಮಾನದಲ್ಲೇ ಕೂರಿಸಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.