Asianet Suvarna News Asianet Suvarna News

ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗಾಗಿ ಭಿಕ್ಷೆ ಬೇಡಿದ ಸಂಸದೆ ಶೋಭಾ!

ಇತ್ತೀಚೆಗಷ್ಟೇ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಶಾಲೆಗಳಿಗೆ ರಾಜ್ಯ ಸರ್ಕಾರ ಅನುದಾನ ಕಡಿತ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಲ್ಲಡ್ಕ ಭಟ್ ಅಭಿಮಾನಿಗಳು ಮತ್ತು ಬಿಜೆಪಿಯು ಭಿಕ್ಷಾಂದೇಹಿ ಎಂಬ ಆಂದೋಲನ ಮೂಲಕ ಭಟ್ಟರ ಶಾಲೆಯ ಮಕ್ಕಳಿಗೆ ನೆರವಿನ ಹಸ್ತ ಚಾಚುವ ಕೆಲಸ ಮಾಡ್ತಿದ್ದಾರೆ.

MP Shobha Joins Begging Campaign for School Run By RSS Leader

ಮಂಗಳೂರು: ಇತ್ತೀಚೆಗಷ್ಟೇ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಶಾಲೆಗಳಿಗೆ ರಾಜ್ಯ ಸರ್ಕಾರ ಅನುದಾನ ಕಡಿತ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಲ್ಲಡ್ಕ ಭಟ್ ಅಭಿಮಾನಿಗಳು ಮತ್ತು ಬಿಜೆಪಿಯು ಭಿಕ್ಷಾಂದೇಹಿ ಎಂಬ ಆಂದೋಲನ ಮೂಲಕ ಭಟ್ಟರ ಶಾಲೆಯ ಮಕ್ಕಳಿಗೆ ನೆರವಿನ ಹಸ್ತ ಚಾಚುವ ಕೆಲಸ ಮಾಡ್ತಿದ್ದಾರೆ.

ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅನುದಾನ ಕಡಿತದ ಬೆನ್ನಲ್ಲೇ ಇದೀಗ ನೆರವಿನ ಮಹಾಪೂರವೇ ಹರಿದು ಬರ್ತಾ ಇದೆ, ಅದ್ರಲ್ಲೂ ಸಾಮಾಜಿಕ ತಾಣಗಳ ಮೂಲಕ ಆರಂಭವಾಗಿರೋ ಭಿಕ್ಷಾಂದೇಹಿ ಅಭಿಯಾನಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಗಿದೆ.

ಹೀಗಾಗಿ ಲಕ್ಷಾಂತರ ರೂ. ಹಣದ ಜೊತೆಗೆ ಕೆ.ಜಿ.ಗಟ್ಟಲೇ ಅಕ್ಕಿ ಮತ್ತು ಅಡುಗೆ ಸಾಮಾಗ್ರಿಗಳು ಕಲ್ಲಡ್ಕ ಶಾಲೆಗೆ ನೆರವಿನ ರೂಪದಲ್ಲಿ ಬಂದು ಸೇರ್ತಿದೆ.

ಸದ್ಯ ಆಂದೋಲನ ರೂಪಿಸಿದವರು ಮುಂದಿನ ಎರಡು ವರ್ಷಗಳಿಗೆ ಆಗುವಷ್ಟು ಹಣವನ್ನು ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಅದ್ರಂತೆ 80 ಲಕ್ಷ ನಗದು ಮತ್ತು ಒಂದಷ್ಟು ಅಕ್ಕಿ ಸಂಗ್ರಹದ ಗುರಿ ಹೊಂದಲಾಗಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios