ವಿಧಾನಸಭೆ ಕಲಾಪದಲ್ಲಿ  ಶಾಸಕರ ಗೈರು ಹಾಜರಾತಿ ಇಂದು ಕೂಡಾ ಮುಂದುವರೆದಿದೆ.  ಕಾಂಗ್ರೆಸ್​'ನಿಂದ 24, ಬಿಜೆಪಿಯಿಂದ 12, ಜೆಡಿಎಸ್'ನಿಂದ  03 ಶಾಸಕರು ಮಾತ್ರ ಕಲಾಪಕ್ಕೆ ಹಾಜರಾಗಿದ್ದಾರೆ. ​    

ಬೆಳಗಾವಿ (ನ.20): ವಿಧಾನಸಭೆ ಕಲಾಪದಲ್ಲಿ ಶಾಸಕರ ಗೈರು ಹಾಜರಾತಿ ಇಂದು ಕೂಡಾ ಮುಂದುವರೆದಿದೆ. ಕಾಂಗ್ರೆಸ್​'ನಿಂದ 24, ಬಿಜೆಪಿಯಿಂದ 12, ಜೆಡಿಎಸ್'ನಿಂದ 03 ಶಾಸಕರು ಮಾತ್ರ ಕಲಾಪಕ್ಕೆ ಹಾಜರಾಗಿದ್ದಾರೆ. ​

ಶಾಸಕರು, ಸಚಿವರ ಗೈರಿಗೆ ಸ್ಪೀಕರ್​ ಕೋಳಿವಾಡ ಗರಂ ಆಗಿದ್ದಾರೆ. ಸದನಕ್ಕೆ ಬರಲು ಶಾಸಕರಿಗೇಕೆ ಉದಾಸೀನತೆ? ಕ್ಷೇತ್ರದಲ್ಲಿ ಸಮಸ್ಯೆ ಕೇಳಿ ಬಂದರೆ ಸದನದಲ್ಲಿ ಇದ್ದೇವೆ ಎನ್ನುತ್ತಾರೆ. ಆದರೆ ಇಲ್ಲಿ ಸದನಕ್ಕೆ ಕೂಡ ಚಕ್ಕರ್ ಹೊಡೆಯುತ್ತಾರೆ. ಇಲ್ಲಿಯೂ ಇಲ್ಲ, ಕ್ಷೇತ್ರದಲ್ಲೂ ಇಲ್ಲ, ಶಾಸಕರೇ ಎಲ್ಲಿದ್ದೀರಾ? ಎಂದು ಸ್ಪೀಕರ್ ಕೋಳಿವಾಡ ಫುಲ್​ ಗರಂ ಆಗಿದ್ದಾರೆ.