ಗನ್ಮ್ಯಾನ್ ಕೈಯಲ್ಲಿ ಶೂ ಎತ್ತಿಸಿದ ಕೈ ಶಾಸಕ; ವ್ಯಕ್ತವಾಯ್ತು ಸಾರ್ವಜನಿಕ ಆಕ್ರೋಶ
ಕೈ ಶಾಸಕ ಪ್ರಸಾದ್ ಅಬ್ಬಯ್ಯರಿಂದ ದರ್ಪ | ತಮ್ಮ ಗನ್ಮ್ಯಾನ್ ಕೈ ಯಲ್ಲಿ ಶೂವನ್ನು ಎತ್ತಿ ಹಿಡಿಸಿದ ಶಾಸಕ | ಶಾಸಕರ ವರ್ತನೆಗೆ ಸಾರ್ವಜನಿಕರ ಆಕ್ರೋಶ
ಧಾರವಾಡ (ಜೂ. 24): ನಿನ್ನೆ ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಎಲ್ಲೆಲ್ಲಿ ಹಾನಿಯಾಗಿದೆ ಎಂದು ಪರಿಶೀಲನೆ ಮಾಡಲು ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ತೆರಳಿದ್ದರು.
ಈ ವೇಳೆ ಮಳೆ ನೀರಿನಿಂದ ಶೂ ಒದ್ದೆಯಾಗುತ್ತೆಂದು ರಸ್ತೆ ಮೇಲೆಯೇ ಬಿಚ್ಚಿ ಅದನ್ನು ತೆಗೆದಿಡಲು ಗನ್ ಮ್ಯಾನ್ ಗೆ ಹೇಳಿದ್ದಾರೆ. ಶಾಸಕರ ಈ ವರ್ತನೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.