Asianet Suvarna News Asianet Suvarna News

ಕಾವೇರಿ ನೀರು: ನೂತನ ಸಂಸದರು ನೋಡ್ಕೋತಾರೆ, ಸಚಿವರೇ ಇದೇನಾ ನಿಮ್ಮ ಒಗ್ಗಟ್ಟು..?

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರವನ್ನು ಸಚಿವರೊಬ್ಬರು ರಾಜ್ಯದ ನೂತನ ಸಂಸದರ ಮೇಲೆ ಹಾಕಿ ತಾವು ಜಾರಿಕೊಂಡಿದ್ದಾರೆ. 

Minister Sa Ra Mahesh reacts on Cauvery Water Management authority order
Author
Bengaluru, First Published May 28, 2019, 6:34 PM IST

ಮೈಸೂರು, [ಮೇ.28]: ಕಾವೇರಿ ನಾಲೆಯಿಂದ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವ ವಿಚಾರವನ್ನು ನೂತನವಾಗಿ ಆಯ್ಕೆಯಾಗಿರುವ ಸಂಸದರು ನೋಡಿಕೊಳ್ಳುತ್ತಾರೆ ಎಂದು ಸಚಿವ ಸಾರಾ ಮಹೇಶ್​ ಹೇಳಿದ್ದಾರೆ.

ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದಿಂದ 24 ಸಂಸದರು ಆಯ್ಕೆಯಾಗಿದ್ದಾರೆ. ಅದ್ರಲ್ಲಿ ಹಲವು ಹಿರಿಯರಿದ್ದಾರೆ. ಈ ಬಗ್ಗೆ ಬರುವ ಕಾನೂನಾತ್ಮಕ ತೊಡಕುಗಳನ್ನ ಅವರು ಬಗೆಹರಿಸುತ್ತಾರೆ ಎಂದು ಓರ್ವ ರಾಜ್ಯದ ಮಂತ್ರಿಯಾಗಿ  ಬೇಜವಾಬ್ದಾರಿ ಮಾತುಗಳನ್ನಾಡಿದರು. 

ಕಾವೇರಿ ನದಿ ನೀರು ಹಂಚಿಕೆ: ಕರ್ನಾಟಕಕ್ಕೆ ಆಘಾತ..!

ಕಾವೇರಿ ನದಿ ನೀರು ಹಂಚಿಕೆಯಲ್ಲಿ ಓರ್ವ ರಾಜ್ಯದ ಮಿನಿಸ್ಟರ್ ಆಗಿ ಎಲ್ಲರೂ ಒಗ್ಗಾಟಗಿರಬೇಕು. ಆದ್ರೆ, ಇದೀಗ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಈ ರೀತಿ ಹೇಳಿಕೆ ನೀಡುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ರಾಜ್ಯದಲ್ಲಿ ತಮ್ಮ ಸರ್ಕಾರ ಇಟ್ಟುಕೊಂಡು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕೆ ವಿನಃ, ಈ ರೀತಿಯ ಬೇಜವಾಬ್ದಾರಿ ಹೇಳಿಕೆ ಸಲ್ಲ.  ಕಾವೇರಿಯ ವಿಷಯದಲ್ಲಿ ಒಗ್ಗಟ್ಟು ಒಗ್ಗಟ್ಟು ಎಂದು ಉದ್ದುದ್ದ ಭಾಷಣ ಮಾಡುವವರು ಇದೇನಾ ನಿಮ್ಮ ಒಗ್ಗಟ್ಟು..?

ರಾಜ್ಯದ ಜಲ, ನೆಲ, ಭಾಷೆ ವಿಷಯ ಬಂದಾಗ ಒಗ್ಗಟ್ಟು ಪ್ರದಶೀಸಬೇಕು.ಇಂತಹ ವಿಚಾರಗಳಲ್ಲಿ ಸುಖಾಸುಮ್ಮನೆ ರಾಜಕೀಯ ಮಾಡುವುದು ಸರಿಯಲ್ಲ.

Follow Us:
Download App:
  • android
  • ios