ಕಾವೇರಿ ನೀರು ವಿವಾದ ಕುರಿತಂತೆ ನಾರಿಮನ್ ಜೊತೆ ಎಂ.ಬಿ. ಪಾಟೀಲ್ ಚರ್ಚೆ

ನವದೆಹಲಿ(ಸೆ.10): ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್​ ಕರ್ನಾಟಕ ಪರ ವಾದಿಸುತ್ತಿರುವ ವಕೀಲ ಫಾಲಿ ನಾರಿಮನ್​ ಅವ​​​​​​​ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿರುವ ನಾರಿಮನ್ ನಿವಾಸದಲ್ಲಿ ರಾಜ್ಯದ ಅಧಿಕಾರಿಗಳ ಜೊತೆ ಎಂ.ಬಿ. ಪಾಟೀಲ್​ ಚರ್ಚಿಸಿದರು. ಕಾವೇರಿ ವಿಚಾರದಲ್ಲಿ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚೆ ನಡೆಸಿದರು.

ಬಳಿಕ ಮಾತನಾಡಿದ ಎಂ.ಬಿ. ಪಾಟೀಲ್, ನೀರು ಬಿಟ್ಟಿರುವುದರಿಂದ ರಾಜ್ಯದ ಬೆಳೆಗಳಿಗೆ ತೊಂದರೆಯಾಗಿದೆ, ರಾಜ್ಯದ ವಾಸ್ತವ ಸ್ಥಿತಿ ಕುರಿತು ನಾರಿಮನ್​ಗೆ ವಿವರಿಸಲಾಗಿದೆ. ತಮಿಳುನಾಡು ಸಾಂಬಾ ಬೆಳೆಗೆ ನೀರು ಕೇಳುತ್ತಿದೆ. ನಮ್ಮ ರೈತರು ಬೆಳೆಗಳಿಗಿರಲಿ, ಕುಡಿಯುವುದಕ್ಕೂ ನೀರಿಲ್ಲ ೆಂಬ ಬಗ್ಗೆ ನಾರಿಮನ್`ಗೆ ಮನವರಿಕೆ ಮಾಡಕೊಟ್ಟಿದ್ದೇವೆ. ಶೀಘ್ರವೇ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತೇವೆ ಅಂತ ನಾರಿಮನ್​​ ಭೇಟಿ ಬಳಿಕ ಸಚಿವ ಎಂ.ಬಿ. ಪಾಟೀಲ್ ಹೇಳಿದರು.