Asianet Suvarna News Asianet Suvarna News

ನಿಮಗೆಲ್ಲಾ ಮದ್ದು, ಗುಂಡು ಕೊಡ್ತೀವಿ : ಸಚಿವ ಡಿಕೆಶಿ ವಿವಾದಾತ್ಮಕ ಹೇಳಿಕೆ

ಎಲ್ಲಾ ಬೆಳವಣಿಗೆಗಳನ್ನು ಬಾರ್ಡರ್​​​​​​​​ನಲ್ಲಿ ಇದ್ದು ನೋಡ್ತಾ ಇರ್ತೀವಿ. ನಮಗೆ ಅವರಿಗಿಂತ ಚೆನ್ನಾಗಿ ವಿದ್ಯೆ ಗೊತ್ತು.

Minister DKS Controversial statement at election canvass

ಗುಂಡ್ಲುಪೇಟೆ(ಏ.07): ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗುಂಡ್ಲುಪೇಟೆ ವಿಧಾನಸಭೆ ಉಪಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು,ನಿಮಗೆಲ್ಲಾ ಮದ್ದು, ಗುಂಡು ಕೊಡ್ತೀವಿ. ನಾವ್ಯಾರೂ  ಕ್ಷೇತ್ರವನ್ನು ಕೈ ಬಿಟ್ಟು ಹೋಗಲ್ಲ.  ಕ್ಷೇತ್ರದ ಬಾರ್ಡರ್​​​​ಗಳಲ್ಲಿ ಠಿಕಾಣಿ ಹಾಕ್ತೀವಿ. ಎಲ್ಲಾ ಬೆಳವಣಿಗೆಗಳನ್ನು ಬಾರ್ಡರ್​​​​​​​​ನಲ್ಲಿ ಇದ್ದು ನೋಡ್ತಾ ಇರ್ತೀವಿ. ನಮಗೆ ಅವರಿಗಿಂತ ಚೆನ್ನಾಗಿ ವಿದ್ಯೆ ಗೊತ್ತು. ಆದರೆ ನಮ್ಮ ಸರ್ಕಾರ ಇರುವುದರಿಂದ ತಗ್ಗಿ ಬಗ್ಗಿ ನಡೆಯುತ್ತಾ ಇದ್ದೇವೆ' ಎಂದು ಸಚಿವ ಡಿ.ಕೆ. ಶಿವಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Follow Us:
Download App:
  • android
  • ios