ನಿನ್ನೆ ರಾತ್ರಿ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರ ದೆಹಲಿಯ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ನಡೆಯಿತು.  

ಬೆಂಗಳೂರು(ಜು.17): ನಿನ್ನೆ ರಾತ್ರಿ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರ ದೆಹಲಿಯ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ನಡೆಯಿತು.

ಸಭೆ ನಳಿಕ ಮಾತನಾಡಿದ ಸಂಸದ ಅನಂತ್ ಕುಮಾರ್ ಹೆಗಡೆ, ಸಭೆಯಲ್ಲಿ ಕೇವಲ ಅಮಿತ್ ಶಾ ಪ್ರವಾಸ ಹಾಗೂ ವಿಧಾನ ಪರಿಷತ್ ಚುನಾವಣೆ ಬಗ್ಗೆ ಚರ್ಚೆಯಾಗಿದೆ. ಇನ್ನು ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಧಾರ್ಮಿಕ ವಿಷಯಕ್ಕೆ ರಾಜಕೀಯ ಮಧ್ಯ ಪ್ರವೇಶ ಮಾಡಲ್ಲ. ಕುರಿತು ಧಾರ್ಮಿಕ ಮುಖಂಡರು ನಿಲುವು ತೆಗೆದುಕೊಳ್ಳಲಿ ಅಂತ ಹೇಳಿದರು.

ಇನ್ನು ಸಭೆಯಲ್ಲಿ ಸಂಸದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ನಳಿನ್ಕುಮಾರ್ಕಟೀಲ್ಸೇರಿ ಹಲವು ಸಂಸದರು ಭಾಗಿಯಾಗಿದ್ರು.