ಎನ್.ಆರ್ ರಮೇಶ್’ಗೆ ಜೆಡಿಎಸ್ ಗಾಳ
ಸದ್ಯ ಬಿಜೆಪಿಯ ಬಂಡಾಯ ನಾಯಕರಾದ ಎನ್.ಆರ್.ರಮೇಶ್ಗೆ ಜೆಡಎಸ್ಗೆ ಗಾಳ ಹಾಕಿದೆ ಎನ್ನಲಾಗುತ್ತಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಬೇಸತ್ತು ಜೆಡಿಎಸ್ ನಾಯಕರ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು : ಸದ್ಯ ಬಿಜೆಪಿಯ ಬಂಡಾಯ ನಾಯಕರಾದ ಎನ್.ಆರ್.ರಮೇಶ್ಗೆ ಜೆಡಎಸ್ಗೆ ಗಾಳ ಹಾಕಿದೆ ಎನ್ನಲಾಗುತ್ತಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಬೇಸತ್ತು ಜೆಡಿಎಸ್ ನಾಯಕರ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ.
N R ರಮೇಶ್ ಜೆಡಿಎಸ್ಗೆ ಬಂದರೆ ಚಿಕ್ಕಪೇಟೆಯಲ್ಲೇ ಟಿಕೆಟ್ ಗ್ಯಾರಂಟಿಯಾಗಿದ್ದು, ಸದ್ಯ ಚಿಕ್ಕಪೇಟೆಯಲ್ಲಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್ ಪಕ್ಷವಿದೆ.
N R ರಮೇಶ್ರನ್ನು ಜೆಡಿಎಸ್ಗೆ ಸೇರಿಸಿಕೊಳ್ಳಲು ನಾಯಕರೂ ಕೂಡ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಉಂಟಾದ ಅಸಮಾಧಾನದ ಲಾಭವನ್ನು ಪಡೆಲು ಜೆಡಿಎಸ್ ಪ್ಲಾನ್ ಮಾಡುತ್ತಿದೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ರಮೇಶ್ ಜೊತೆ ಮಾತುಕತೆ ಮುಂದುವರೆಸಲು ಜೆಡಿಎಸ್ ನಾಯಕರು ಆಸಕ್ತಿ ತೋರಿದ್ದು, ನಿನ್ನೆ ರಾತ್ರಿಯೇ ಜೆಡಿಎಸ್ ನಾಯಕರ ಜೊತೆ ಚರ್ಚೆ ನಡೆದಿದ್ದು, ವಾರದೊಳಗೆ ಈ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.