ಅನಾರೋಗ್ಯದಿಂದ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದು, ಅವರ ಉತ್ತರಾಧಿಕಾರಿಯನ್ನು ಈಗಾಗಾಲೇ ನೇಮಕ ಮಾಡಲಾಗಿದೆ. 

ಬೆಂಗಳೂರು : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಹಾಗೂ ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ (74) ಅವರು ತೀವ್ರ ಹೃದಯಾಘಾತದಿಂದ ಲಿಂಗೈಕ್ಯರಾದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಸವ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಈ ಹಿಂದೆಯೇ ಸೂಚನೆ ನೀಡಿರುವಂತೆ ಜಗದ್ಗುರು ಮಾತೆ ಗಂಗಾದೇವಿ ಅವರನ್ನು ಉತ್ತರಾಧಿಕಾರಿಯಾಗಿ ಘೋಷಣೆ ಮಾಡಲಾಗಿದೆ. 

ಮುಂದಿನ ವಿಧಿ- ವಿಧಾನಗಳನ್ನು ಗಂಗಾದೇವಿ ಅವರು ನಡೆಸಿಕೊಡುತ್ತಾರೆ ಎಂದು ಚೆನ್ನಬಸವೇಶ್ವರ ಜ್ಞಾನ ಪೀಠದ ಪೀಠಾಧ್ಯಕ್ಷ ಚೆನ್ನಬಸವಾನಂದ ಸ್ವಾಮೀಜಿ ಘೋಷಿಸಿದರು. ಈ ವೇಳೆ ಮಾತೆ ಮಹಾದೇವಿ ಅವರನ್ನು ನೆನೆದು ಮಾತನಾಡಿದ ಮಾತೆ ಗಂಗಾದೇವಿ ಕಣ್ಣೀರಿಟ್ಟರು.