ತನ್ನ ಕಿರಿಯವರೆಲ್ಲರೂ ಮದುವೆಯಾದರೂ ತನಗೆ ಹುಡುಗಿ ಸಿಗಲಿಲ್ಲವೆಂಬ ಚಿಂತೆ ಈತನಿಗೆ ಕಾಡುತ್ತಿತ್ತು.

ಬೆಂಗಳೂರು(ಜು.06):ವಿವಾಹವಾಗಲು ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವೈಯಾಲಿಕಾವಲ್'ನ ಕೊಕನಟ್ ಅವೆನ್ಯೂ ರಸ್ತೆಯಲ್ಲಿ ನಡೆದಿದೆ.ಶಿವರಾಜ್(30)ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ತಮಿಳುನಾಡಿನಿಂದ 4 ತಿಂಗಳ ಹಿಂದೆ ನಗರಕ್ಕೆ ಬಂದು ನೆಲಸಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತನ್ನ ಕಿರಿಯವರೆಲ್ಲರೂ ಮದುವೆಯಾದರೂ ತನಗೆ ಹುಡುಗಿ ಸಿಗಲಿಲ್ಲವೆಂಬ ಚಿಂತೆ ಈತನಿಗೆ ಕಾಡುತ್ತಿತ್ತು. ಇದನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಅದೇ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಪೋಷಕರು ತಿಳಿಸಿದ್ದಾರೆ.