ರಸ್ತೆಯಲ್ಲಿಯೇ ಹಾರ್ಟ್ ಅಟ್ಯಾಕ್, ಸಿಪಿಆರ್ ಮಾಡಿ ಜೀವ ಉಳಿಸಿದ ಹೋಂ ಗಾರ್ಡ್
ಬೈಕ್ನಲ್ಲಿ ಪಯಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗಿ, ಕುಸಿದು ಬಿದ್ದಾಗ, ಅಲ್ಲಿಯೇ ಇದ್ದ ಹೋಂ ಗಾರ್ಡ್ ಒಬ್ಬರು ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ಹೋಂ ಗಾರ್ಡ್ಗಳ ಈ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ.
ಹೈದರಾಬಾದ್: ಬೈಕ್ನಲ್ಲಿ ಪಯಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗಿ, ಕುಸಿದು ಬಿದ್ದಾಗ, ಅಲ್ಲಿಯೇ ಇದ್ದ ಹೋಂ ಗಾರ್ಡ್ ಒಬ್ಬರು ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ಹೋಂ ಗಾರ್ಡ್ಗಳ ಈ ಕಾರ್ಯಕ್ಕೆ ಅಪಾರ ಶ್ಲಾಘನೆ ವ್ಯಕ್ತವಾಗಿದೆ.
ಈ ಬಗ್ಗೆ ತೆಲಂಗಾಣದ ಸ್ಥಳೀಯಾಡಳಿತ ಹಾಗೂ ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮ್ರಾವ್ ಸಹ ಟ್ವೀಟ್ ಮಾಡಿದ್ದು, ಬಹದೂರ್ಪುರ ಠಾಣೆಯ ಹೋಂ ಗಾರ್ಡ್ ಕೆ. ಚಂದನ್ ಮತ್ತು ಇನಾಯುಥುಲ್ಲಾ ಖಾನ್ ಅವರನ್ನು ಅಭಿನಂದಿಸಿದ್ದಾರೆ.
Yesterday Homeguards K. Chandan & Inayathulla Khan of Bahadurpura PS saved the life of a person who had suddenly undergone a cardiac arrest at Puranapul Darwaja in Old City🙏🙏
— KTR (@KTRTRS) February 1, 2018
Many Constables & Homeguards in Hyderabad have undergone CPR (cardio pulmonary resuscitation) training pic.twitter.com/k7D13RwqHL
ಹೈದರಾಬಾದ್ನಲ್ಲಿ ಬಹುತೇಕ ಪೊಲೀಸ್ ಪೇದೆಗಳು ಹಾಗೂ ಹೋಮ್ ಗಾರ್ಡ್ಸ್ ಈ ಸಿಪಿಆರ್ ತರಬೇತಿ ಪಡೆದಿದ್ದಾರೆ. ಶಾಲಾ, ಕಾಲೇಜು ಹಾಗೂ ಇತರೆಡೆ ಇಂಥ ತರಬೇತಿ ನೀಡಿದರೆ, ಅನೇಕರ ಜೀವ ಉಳಿಸಲೂ ಸಹಾಯವಾಗಬಹುದು.
This is phenomenal! Just a little knowledge about CPR can save somebodies life ! This is what we are aiming at Laerdal Medical @hydcitypolice @cpcybd @JtCPTrafficHyd @CPHydCity @TelanganaDGP pic.twitter.com/eAAs8PHHTc
— Anjani kumar (@Anjanikumar2110) February 1, 2018
ಏನಿದು ಸಿಪಿಆರ್?
ಕಾರ್ಡಿಯೋ ಪಲ್ಮನರಿ ರಿಸಸಿಟೇಷನ್ (ಸಿಪಿಆರ್) ಎಂಬುವುದು ವ್ಯಕ್ತಿಯೊಬ್ಬರು ಹೃದಯಾಘಾತ ಅಥವಾ ಯಾವುದೇ ಉಸಿರಾಟದ ತೊಂದರೆ ಅನುಭವಿಸಿದಾಗ ನೀಡುವ ಪ್ರಥಮ ಚಿಕಿತ್ಸೆ. ಹೃದಯ ಬಹುತೇಕ ಸ್ಥಗಿತಗೊಂಡತಾದರೂ, ಈ ಚಿಕಿತ್ಸೆ ನೀಡುವುದರಿಂದ ರೋಗಿ ಸುಧಾರಿಸಿಕೊಳ್ಳುತ್ತಾನೆ. ಆ ನಂತರ ಆ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದಲ್ಲಿ, ಸುಧಾರಿಸಿಕೊಳ್ಳುತ್ತಾರೆ. ತುರ್ತು ಸಂದರ್ಭದಲ್ಲಿ ಈ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ನಾಳಗಳು ಸಂಕುಚಿತಗೊಂಡು ಉಸಿರಾಟದ ತೊಂದರೆ ಅನುಭವಿಸುತ್ತಿರುವಾಗ ಈ ಚಿಕಿತ್ಸೆ ನೀಡಿದರೆ, ತಕ್ಷಣವೇ ರಿಲ್ಯಾಕ್ಸ್ ಆಗುತ್ತಾನೆ. ಆಸ್ಪತ್ರೆಗೆ ಸಾಗಿಸುವಷ್ಟು ಸಮಯ ಸಿಗುವುದರಿಂದ ಮನುಷ್ಯ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ.