Asianet Suvarna News Asianet Suvarna News

‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎನ್ನುತ್ತಲೇ ಬೆಂಕಿ ಹಚ್ಚಿಕೊಂಡ ಭಕ್ತ ಸಾವು!

ತೀವ್ರ ಸ್ವರೂಪ ಪಡೆದುಕೊಂಡ ಶಬರಿಮಲೆ ವಿವಾದ| ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರ| ಶಬರಿಮಲೆ ಬೆಟ್ಟದ ಸುತ್ತ ನಿಷೇಧಾಜ್ಞೆ ಹೇರಿದ ರಾಜ್ಯ ಸರ್ಕಾರ| ನಿಷೇಧಾಜ್ಞೆ ವಿರೋಧಿಸಿ ಬಿಜೆಪಿ ನಾಯಕ ಸಿಕೆ ಪದ್ಮನಾಭನ್ ಆಮರಣ ಉಪವಾಸ| ಪ್ರತಿಭಟನಾ ಸ್ಥಳದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಭಕ್ತ| ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ವೇಣುಗೋಪಾಲನ್ ನಾಯರ್| ನಾಳೆ ರಾಜ್ಯ ಬಂದ್ ಗೆ ಕರೆ ನೀಡಿದ ಬಿಜೆಪಿ ಕೇರಳ ಘಟಕ
 

Man Dies After He Sets Himself on Fire on Sabarimala Row
Author
Bengaluru, First Published Dec 13, 2018, 6:58 PM IST

ತಿರುವನಂತಪುರಂ(ಡಿ.13): ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂದು ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತನೋರ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಿಜೆಪಿ ನಾಯಕ ಸಿಕೆ ಪದ್ಮನಾಭನ್ ಶಬರಿಮಲೆ ಸುತ್ತ ಹೇರಲಾಗಿರುವ ನಿಷೇಧಾಜ್ಞೆ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ವೇಳೆ ಅಯ್ಯಪ್ಪ ಭಕ್ತನೋರ್ವ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Man Dies After He Sets Himself on Fire on Sabarimala Row

ಆತ್ಮಹತ್ಯೆ ಮಾಡಿಕೊಂಡ ಭಕ್ತನನ್ನು ವೇಣುಗೋಪಾಲನ್ ನಾಯರ್ ಎಂದು ಗುರುತಿಸಲಾಗಿದ್ದು, ಬೆಂಕಿ ಹಚ್ಚಿಕೊಳ್ಳುವ ಮುನ್ನ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಮಂತ್ರ ಪಠಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ.

ಇನ್ನು ಭಕ್ತ ವೇಣುಗೋಪಾಲನ್ ನಾಯರ್ ಆತ್ಮಹತ್ಯೆಗೆ ತೀವ್ರ ಸಂತಾಪ ಸೂಚಿಸಿರುವ ರಾಜ್ಯ ಬಿಜೆಪಿ ಘಟಕ, ಈ ಸಾವಿಗೆ ಸಿಎಂ ಪಿಣರಾಯಿ ವಿಜಯನ್ ಅವರೇ ನೇರ ಕಾರಣ ಎಂದು ಆರೋಪಿಸಿದೆ. ಅಲ್ಲದೇ ರಾಜ್ಯ ಸರ್ಕಾರದ ನಿಲುವು ವಿರೋಧಿಸಿ ಶುಕ್ರವಾರ ರಾಜ್ಯ ಬಂದ್ ಗೆ ಕರೆ ನೀಡಿದೆ.

Follow Us:
Download App:
  • android
  • ios