Asianet Suvarna News Asianet Suvarna News

ಪುದುಚೇರಿ ಸರ್ಕಾರದಲ್ಲಿ ಕಿರಣ್‌ ಬೇಡಿ ಹಸ್ತಕ್ಷೇಪ ಸಲ್ಲ: ಹೈಕೋರ್ಟ್‌

ಪುದುಚೇರಿ ಸರ್ಕಾರದಲ್ಲಿ ಕಿರಣ್‌ ಬೇಡಿ ಹಸ್ತಕ್ಷೇಪ ಮಾಡಂಗಿಲ್ಲ: ಹೈಕೋರ್ಟ್‌ | ಕಿರಣ್‌ ಬೇಡಿ ತರಾಟೆಗೆ ತೆಗೆದುಕೊಂಡ ಮದ್ರಾಸ್‌ ಹೈಕೋರ್ಟ್‌

Madras High Court asks Kiran Bedi not to interfere in govt affairs
Author
Bengaluru, First Published May 1, 2019, 10:15 AM IST

ನವದೆಹಲಿ (ಮೇ. 01): ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರ ಜೊತೆ ಅಧಿಕಾರ ಕಲಹದಲ್ಲಿ ತೊಡಗಿರುವ ರಾಜ್ಯಪಾಲೆ ಕಿರಣ್‌ ಬೇಡಿ ಅವರನ್ನು ಮದ್ರಾಸ್‌ ಹೈಕೋರ್ಟ್‌ ತರಾಟೆ ತೆಗೆದುಕೊಂಡಿದೆ.

ಸರ್ಕಾರದ ದೈನಂದಿನ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವ ಅಥವಾ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಸಂಪುಟದ ಸದಸ್ಯರು ಇರುವ ಹೊರತಾಗಿಯೂ ಕಿರಣ್‌ ಬೇಡಿ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್‌ ಶಾಸಕ ಲಕ್ಷ್ಮೇನಾರಾಯಣ್‌ ಅರ್ಜಿ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಮಂತ್ರಿಮಂಡಲ ತೆಗೆದುಕೊಂಡ ನಿರ್ಧಾರಕ್ಕೆ ಆಡಳಿತ ವರ್ಗ ಬದ್ಧವಾಗಿರಬೇಕು ಎಂದು ಕೋರ್ಟ್‌ ಹೇಳಿದೆ.
 

Follow Us:
Download App:
  • android
  • ios