ಎಂ ಸಿ ಮನಗೂಳಿ, ತಮ್ಮಣ್ಣಗೆ ಸಚಿವ ಸ್ಥಾನ; ಬೆಂಬಲಿಗರ ಸಂಭ್ರಮಾಚರಣೆ
ಸಿಂಧಗಿ ಶಾಸಕ ಎಂ ಸಿ ಮನಗೂಳಿಗೆ ಸಚುವ ಸ್ಥಾನ ಕೈ ತಪ್ಪಿತು ಎಂದು ಅವರ ಬೆಂಬಲಿಗರು ದೇವೇಗೌಡರ ಮನೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೊನೆ ಕ್ಷಣದಲ್ಲಿ ಸಚಿವರ ಪಟ್ಟಿ ಬದಲಾಗಿದ್ದು ಮನಗೂಳಿಗೆ ಸಚಿವ ಸ್ಥಾನ ನೀಡಲಾಗಿದೆ. ಅಲ್ಲಿಯವರೆಗೂ ಪ್ರತಿಭಟನೆ ನಡೆಸುತ್ತಿದ್ದ ಬೆಂಬಲಿಗರು, ಸಂಭ್ರಮಾಚರಣೆ ಮಾಡಿದ್ದಾರೆ.
ಬೆಂಗಳೂರು (ಜೂ. 06): ಸಿಂಧಗಿ ಶಾಸಕ ಎಂ ಸಿ ಮನಗೂಳಿಗೆ ಸಚಿವ ಸ್ಥಾನ ಕೈ ತಪ್ಪಿತು ಎಂದು ಅವರ ಬೆಂಬಲಿಗರು ದೇವೇಗೌಡರ ಮನೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೊನೆ ಕ್ಷಣದಲ್ಲಿ ಸಚಿವರ ಪಟ್ಟಿ ಬದಲಾಗಿದ್ದು ಮನಗೂಳಿಗೆ ಸಚಿವ ಸ್ಥಾನ ನೀಡಲಾಗಿದೆ. ಅಲ್ಲಿಯವರೆಗೂ ಪ್ರತಿಭಟನೆ ನಡೆಸುತ್ತಿದ್ದ ಬೆಂಬಲಿಗರು, ಸಂಭ್ರಮಾಚರಣೆ ಮಾಡಿದ್ದಾರೆ.
ಜೆಡಿಎಸ್ ಸಚಿವರ ಪಟ್ಟಿ ಬೆಳಿಗ್ಗೆ 8 ಇತ್ತು. ಇದೀಗ ಇಬ್ಬರ ಸೇರ್ಪಡೆಯಾಗಿದೆ. ಮದ್ದೂರು ಶಾಸಕ, ದೇವೇಗೌಡರ ಬೀಗರು ತಮ್ಮಣ್ಣ ಹಾಗೂ ಸಿಂಧಗಿ ಶಾಸಕ ಎಂ ಸಿ ಮನಗೂಳಿ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ.