ಪತ್ರಕರ್ತನ ಮೇಲೆ ಪೊಲೀಸರ ಹಲ್ಲೆ, ಬಟ್ಟೆಬಿಚ್ಚಿ ಬಾಯಿಗೆ ಮೂತ್ರ
ಪತ್ರಕರ್ತನ ಮೇಲೆ ಪೊಲೀಸರ ಹಲ್ಲೆ, ಬಟ್ಟೆಬಿಚ್ಚಿ ಬಾಯಿಗೆ ಮೂತ್ರ| ಹಲ್ಲೆಗೊಳಗಾದ ಪತ್ರಕರ್ತ ಅಮಿತ್ ಶರ್ಮಾ ಆರೋಪ
ಲಖನೌ[ಜೂ.13]: ಹಳಿತಪ್ಪಿದ್ದ ಸರಕು ಸಾಗಣೆ ರೈಲೊಂದರ ಬಗ್ಗೆ ವರದಿ ಮಾಡಲು ತೆರಳಿದ್ದ ಟೀವಿ ವಾಹಿನಿಯೊಂದರ ಪತ್ರಕರ್ತನ ಮೇಲೆ ರೈಲ್ವೆ ಪೊಲೀಸರು ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಶಾಮ್ಲಿ ನಗರದಲ್ಲಿ ನಡೆದಿದೆ.
ಈ ನಡುವೆ ಪೊಲೀಸರು ನನ್ನನ್ನು ವಿವಸ್ತ್ರನನ್ನಾಗಿ ಮಾಡಿ ಬಾಯಿಗೆ ಮೂತ್ರ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಪತ್ರಕರ್ತ ಅಮಿತ್ ಶರ್ಮಾ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ರೈಲ್ವೆ ಅಧಿಕಾರಿಗಳ ಹಗರಣವೊಂದನ್ನು ಕೆಲ ದಿನಗಳ ಹಿಂದೆ ಅಮಿತ್ ಬಯಲಿಗೆಳೆದಿದ್ದರು ಎನ್ನಲಾಗಿದೆ.
#WATCH Shamli: GRP personnel thrash a journalist who was covering the goods train derailment near Dhimanpura tonight. He says, "They were in plain clothes. One hit my camera&it fell down. When I picked it up they hit&abused me. I was locked up, stripped&they urinated in my mouth" pic.twitter.com/nS4hiyFF1G
— ANI UP (@ANINewsUP) June 11, 2019
ಈ ಹಿನ್ನೆಲೆಯಲ್ಲಿ ಮುಫ್ತಿಯಲ್ಲಿದ್ದ ರೈಲ್ವೆ ಪೊಲೀಸರಿಬ್ಬರು, ಮಂಗಳವಾರ ರಾತ್ರಿ ವರದಿಗೆಂದು ತೆರಳಿದ್ದ ಅಮಿತ್ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದಾರೆ.