ಪ್ರಧಾನಿ ಮೋದಿ ಉದ್ದೇಶಿಸಿ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದೇಕೆ?
ನಕಲಿ ಮತದಾನದ ಬಗ್ಗೆ ಸಂಸದ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಪ್ರತಾಪ್ ಮಾಡಿರುವ ಟ್ವೀಟ್ ಹೊಸ ಚರ್ಚೆ ಹುಟ್ಟುಹಾಕಿದೆ.
ಮೈಸೂರು[ಸೆ.1] ಪ್ರಧಾನಿ ನರೇಂದ್ರ ಮೋದಿಯವರೇ, ಮೈಸೂರು ನಗರಪಾಲಿಕೆಗೆ ಚುನಾವಣೆ ಮುಗಿಯಿತು. ಆದರೆ ನಕಲಿ ಮತದಾನ ತಡೆಯಲು ನಮ್ಮಿಂದ ಸಾಧ್ಯವಾಗಿಲ್ಲ. ಹಿಂದುಗಳ ಕುಟುಂಬದ ಹೆಸರಿನಲ್ಲಿ 15-20 ನಕಲಿ ಮತದಾರರಿದ್ದಾರೆ ಎಂಬ ವಿಚಾರವನ್ನು ಪ್ರತಾಪ್ ಎತ್ತಿಕೊಂಡಿದ್ದಾರೆ.
ಮತದಾರರ ಗುರುತು ಚೀಟಿ ಇರುವ ವಿಳಾಸಕ್ಕೆ ಹೋಗಿ ಪರಿಶೀಲಿಸಿದರೆ ಖಾಲಿ ಸೈಟ್ ಕಾಣಿಸುತ್ತದೆ. 2-3 ಸದಸ್ಯರಿರುವ ಹಿಂದೂಗಳ ಮನೆಗಳ ವಿಳಾಸದಲ್ಲಿ 15-20 ಮುಸ್ಲಿಂ ಮತದಾರರ ಹೆಸರಿದೆ. ಇನ್ನು ಮುಂದೆ ನಕಲಿ ಮತದಾನ ತಡೆಯಲು ದಯವಿಟ್ಟು ವೋಟರ್ ಐಡಿಯನ್ನು ಆಧಾರ್ ಕಾರ್ಡ್ ಜತೆ ಲಿಂಕ್ ಮಾಡಬೇಕು ಎಂದು ಪ್ರತಾಪ್ ಮನವಿ ಮಾಡಿಕೊಂಡಿದ್ದಾರೆ.
Beloved PM @narendramodi ji, voting4 Mys City Corp just over. But v r unable2 stop proxy voting, coz de hv voter ID n their names r in d voters list, but if u go2 their address,u’ll find empty sites n many 2-3 member Hindu families hv 15-20 Muslim voters! Pls link V-ID wit Aadhar
— Pratap Simha (@mepratap) August 31, 2018