Asianet Suvarna News Asianet Suvarna News

ಪ್ರಯಾಣಿಕರಿಗೆ ಗುಡ್ ನ್ಯೂಸ್ : ಇಲ್ಲಿಗೂ ಇನ್ನು ಕೆಎಸ್ ಆರ್ ಟಿಸಿ ಬಸ್ ಸೇವೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಸಾರ್ಟಿಸಿ) ಕೇಂದ್ರೀಯ ವಿಭಾಗದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು- ತಂಜಾವೂರು ಮತ್ತು ಬೆಂಗಳೂರು- ಕೊಯಮತ್ತೂರು ಮಾರ್ಗದಲ್ಲಿಒಂದು ನಾನ್‌ ಎಸಿ ಸ್ಲೀಪರ್‌ ಬಸ್‌ ಸೇವೆ ಒದಗಿಸಲಿದೆ. 

KSRTC Bus Service To thanjavur From september 24
Author
Bengaluru, First Published Sep 21, 2018, 7:53 AM IST

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಸಾರ್ಟಿಸಿ) ಕೇಂದ್ರೀಯ ವಿಭಾಗದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು- ತಂಜಾವೂರು ಮತ್ತು ಬೆಂಗಳೂರು- ಕೊಯಮತ್ತೂರು ಮಾರ್ಗದಲ್ಲಿ ಸೆ.24ರಿಂದ ತಲಾ ಒಂದು ನಾನ್‌ ಎಸಿ ಸ್ಲೀಪರ್‌ ಬಸ್‌ ಸೇವೆ ನೀಡಲಿದೆ.

ಬೆಂಗಳೂರು- ತಂಜಾವೂರು ಮಾರ್ಗದ ಬಸ್‌ ನಿತ್ಯ ರಾತ್ರಿ 9.30ಕ್ಕೆ ಹೊರಟು ಬೆಳಗ್ಗೆ 6.15ಕ್ಕೆ ತಂಜಾವೂರು ತಲುಪಲಿದೆ. ಅಲ್ಲಿಂದ ರಾತ್ರಿ 9ಕ್ಕೆ ಹೊರಟು ಮುಂಜಾನೆ 5.45ಕ್ಕೆ ಬೆಂಗಳೂರು ತಲುಪಲಿದೆ. ವಯಸ್ಕ ಪ್ರಯಾಣಿಕರಿಗೆ ಟಿಕೆಟ್‌ ದರ .625 ನಿಗದಿಗೊಳಿಸಲಾಗಿದೆ. 

ಬೆಂಗಳೂರು- ಕೊಯಮತ್ತೂರು ಮಾರ್ಗದ ಬಸ್‌ ನಿತ್ಯ ರಾತ್ರಿ 11ಕ್ಕೆ ಹೊರಟು ಬೆಳಗ್ಗೆ 6.30ಕ್ಕೆ ಕೊಯಮತ್ತೂರು ತಲುಪಲಿದೆ. ಅಲ್ಲಿಂದ ರಾತ್ರಿ 10.15ಕ್ಕೆ ಹೊರಟು ಬೆಳಗ್ಗೆ 6.30ಕ್ಕೆ ಬೆಂಗಳೂರು ತಲುಪಲಿದೆ. ವಯಸ್ಕರ ಪ್ರಯಾಣಕ್ಕೆ ಟಿಕೆಟ್‌ ದರ .580 ನಿಗದಿಗೊಳಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.

Follow Us:
Download App:
  • android
  • ios