ಪೊಲೀಸ್ ಡ್ರೆಸ್ ಹಾಕಿಕೊಂಡು ಬಂದು ಕಿಡ್ನಾಪ್; ಪುತ್ತೂರಿನಲ್ಲಿ ನಡೆಯಿತು ಸಿನಿಮೀಯ ಘಟನೆ
ಪೊಲೀಸ್ ಡ್ರೆಸ್ ಹಾಕಿಕೊಂಡು ಬಂದು ಕಿಡ್ನಾಪ್ ಮಾಡಿರುವ ನಾಟಕೀಯ ಪ್ರಹಸನ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ನಡೆದಿದೆ.
ಮಂಗಳೂರು (ಮಾ. 28): ಪೊಲೀಸ್ ಡ್ರೆಸ್ ಹಾಕಿಕೊಂಡು ಬಂದು ಕಿಡ್ನಾಪ್ ಮಾಡಿರುವ ನಾಟಕೀಯ ಪ್ರಹಸನ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ನಡೆದಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರ ಹೆಸರಲ್ಲಿ ಕುತ್ಯಾಡಿ ನಿವಾಸಿ ಶ್ರೀಧರ ಎಂಬುವವರನ್ನು ಅಪಹರಣ ಮಾಡಲಾಗಿದೆ. ಮಾ.26 ರ ರಾತ್ರಿ ಬಂದು ಪೊಲೀಸ್ ಠಾಣೆಗೆ ಬಾ ಅಂತಾ ಕರೆದುಕೊಂಡು ಹೋಗಿದ್ದಾರೆ ಅಪರಿಚಿತರು. ನಂತರ ನಿನ್ನೆ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದಾಗ ನಿಜಾಂಶ ಹೊರ ಬಿದ್ದಿದೆ. ಈ ಬಗ್ಗೆ ಶ್ರೀಧರ್ ಪತ್ನಿ ಸೌಮ್ಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.