Asianet Suvarna News Asianet Suvarna News

ಬಿಜೆಪಿಗೆ ಬಂದ ಪಾದ್ರಿಗಳು..ಸುದ್ದಿ ಹಿಂದೆ ಯಾರಿದ್ದಾರೆ!?

ಸೋಶಿಯಲ್ ಮೀಡಿಯಾದಲ್ಲಿ ಯಾವ ಸುದ್ದಿ ಹೇಗೆ ಹರಿದಾಡುತ್ತದೆ ಎಂದು ಹೇಳಲಾಗುವುದಿಲ್ಲ. ಇದೀಗ ಕೇರಳದ ಪಾದ್ರಿಗಳು ಬಿಜೆಪಿ ಸೇರಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕೇರಳ ಬಿಜೆಪಿಯೇ ತನ್ನ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿತ್ತು. ಆದರೆ ಪಾದ್ರಿಯೊಬ್ಬರು ಈ ಸುದ್ದಿನ್ನು ಸುಳ್ಳು ಎಂದು ಹೇಳಿದ್ದಾರೆ.

Kerala Fr. Mathew Manavath dismisses news of joining BJP Viral Check
Author
Bengaluru, First Published Sep 26, 2018, 10:13 PM IST

ಕೊಟ್ಟಾಯಮ್[ಸೆ.26]  ಮಾಥ್ಯೂ ಮನಾವತ್ ಬಿಜೆಪಿ ಸೇರುವ ವಿಚಾರವನ್ನು ಅಲ್ಲಗಳೆದಿದ್ದಾರೆ.  ಜನರು ಮತ್ತು ಮಾಧ್ಯಮಗಳು ಇಂಥ ಸುದ್ದಿಯ ಪೂರ್ವಾಪರ ತಿಳಿಯದೆ ಪ್ರಕಟ ಮಾಡಬಾರದು ಎಂದಿದ್ದಾರೆ.

ಕೇರಳದ ಪಾದ್ರಿಗಳು ಬಿಜೆಪಿ ಸೇರಿದ್ದಾರೆ ಎಂದು ಎಲ್ಲ ಮಾಧ್ಯಮಗಳಲ್ಲಿಯೂ ವರದಿಯಾಗಿತ್ತು.  ಮಾಥ್ಯೂ ಮನಾವತ್ , ಜಾಕೋಬ್ ಸಿರಿಯನ್ ಚರ್ಚ್ನ  ಗೀವರ್ಗೀಸ್, ಥಾಮಸ್ ಕುಲತುಂಕಲ್ ಬಿಜೆಪಿ ಸೇರಿದ್ದಾರೆ ಎನ್ನಲಾಗಿತ್ತು. ಇದಾದ ಮೇಲೆ ಬಿಜೆಪಿ ಸಹ ಮಾಥ್ಯೂ ಮನಾವತ್ ಅವರ ಹೆಸರನ್ನು ಫೇಸ್ ಬುಕ್ ನಿಂದ ತೆಗೆದು ಹಾಕಿದೆ.

ಒಟ್ಟಿನಲ್ಲಿ ಈ ಸುದ್ದಿ ಇವತ್ತಿನ ಮಟ್ಟಿಗೆ ಕೇರಳದಲ್ಲಿ ದೊಡ್ಡ  ವಿವಾದಕ್ಕೆ ಕಾರಣವಾಗಿತ್ತು. ನೆರೆಯಿಂದ ತತ್ತರಿಸಿದ್ದ ರಾಜ್ಯದಲ್ಲಿ ಇಂಥದ್ದೊಂದು ಸುದ್ದಿಯೂ ಉಹಾಪೋಹಗಳ ಪ್ರವಾಹ ಸೃಷ್ಟಿ ಮಾಡಿತ್ತು.

 

Follow Us:
Download App:
  • android
  • ios