ಬಿಜೆಪಿಗೆ ಬಂದ ಪಾದ್ರಿಗಳು..ಸುದ್ದಿ ಹಿಂದೆ ಯಾರಿದ್ದಾರೆ!?
ಸೋಶಿಯಲ್ ಮೀಡಿಯಾದಲ್ಲಿ ಯಾವ ಸುದ್ದಿ ಹೇಗೆ ಹರಿದಾಡುತ್ತದೆ ಎಂದು ಹೇಳಲಾಗುವುದಿಲ್ಲ. ಇದೀಗ ಕೇರಳದ ಪಾದ್ರಿಗಳು ಬಿಜೆಪಿ ಸೇರಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕೇರಳ ಬಿಜೆಪಿಯೇ ತನ್ನ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿತ್ತು. ಆದರೆ ಪಾದ್ರಿಯೊಬ್ಬರು ಈ ಸುದ್ದಿನ್ನು ಸುಳ್ಳು ಎಂದು ಹೇಳಿದ್ದಾರೆ.
ಕೊಟ್ಟಾಯಮ್[ಸೆ.26] ಮಾಥ್ಯೂ ಮನಾವತ್ ಬಿಜೆಪಿ ಸೇರುವ ವಿಚಾರವನ್ನು ಅಲ್ಲಗಳೆದಿದ್ದಾರೆ. ಜನರು ಮತ್ತು ಮಾಧ್ಯಮಗಳು ಇಂಥ ಸುದ್ದಿಯ ಪೂರ್ವಾಪರ ತಿಳಿಯದೆ ಪ್ರಕಟ ಮಾಡಬಾರದು ಎಂದಿದ್ದಾರೆ.
ಕೇರಳದ ಪಾದ್ರಿಗಳು ಬಿಜೆಪಿ ಸೇರಿದ್ದಾರೆ ಎಂದು ಎಲ್ಲ ಮಾಧ್ಯಮಗಳಲ್ಲಿಯೂ ವರದಿಯಾಗಿತ್ತು. ಮಾಥ್ಯೂ ಮನಾವತ್ , ಜಾಕೋಬ್ ಸಿರಿಯನ್ ಚರ್ಚ್ನ ಗೀವರ್ಗೀಸ್, ಥಾಮಸ್ ಕುಲತುಂಕಲ್ ಬಿಜೆಪಿ ಸೇರಿದ್ದಾರೆ ಎನ್ನಲಾಗಿತ್ತು. ಇದಾದ ಮೇಲೆ ಬಿಜೆಪಿ ಸಹ ಮಾಥ್ಯೂ ಮನಾವತ್ ಅವರ ಹೆಸರನ್ನು ಫೇಸ್ ಬುಕ್ ನಿಂದ ತೆಗೆದು ಹಾಕಿದೆ.
ಒಟ್ಟಿನಲ್ಲಿ ಈ ಸುದ್ದಿ ಇವತ್ತಿನ ಮಟ್ಟಿಗೆ ಕೇರಳದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನೆರೆಯಿಂದ ತತ್ತರಿಸಿದ್ದ ರಾಜ್ಯದಲ್ಲಿ ಇಂಥದ್ದೊಂದು ಸುದ್ದಿಯೂ ಉಹಾಪೋಹಗಳ ಪ್ರವಾಹ ಸೃಷ್ಟಿ ಮಾಡಿತ್ತು.