ಈ ಪ್ರಕರಣದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ತಿರುವನಂತಪುರ(ಮಾ.04): ಕೇರಳದ ಎಲ್'ಡಿಎಫ್ ಸರ್ಕಾರದ ಬಜೆಟ್ ಮಂಡನೆ ಶುಕ್ರವಾರ ಭಾರಿ ವಿವಾದಕ್ಕೀಡಾಗಿದೆ.
ಬಜೆಟ್ ಮಂಡನೆಯಾಗುವ ಮುನ್ನವೇ ಅದರಲ್ಲಿನ ಅಂಶಗಳು ಫೇಸ್'ಬುಕ್ನಲ್ಲಿ ಹರಿದಾಡಿವೆ. ಇದರ ನಡುವೆಯೇ, ವಿತ್ತ ಮಂತ್ರಿ ಥಾಮಸ್ ಐಸಾಕ್ ಅವರು ವಿಧಾನಸಭೆಯಲ್ಲಿ 3 ಗಂಟೆ ಸುದೀರ್ಘ ಬಜೆಟ್ ಅನ್ನು ಮುಗಿಸುವ ಹಂತದಲ್ಲಿ, ಕಾಂಗ್ರೆಸ್ ಸದಸ್ಯರು ಸೋರಿಕೆಯಾದ ಬಜೆಟ್ನ ಅಂಶಗಳನ್ನು ಓದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಬಳಿಕ ಸರ್ಕಾರದ ಪ್ರಮಾದ ಖಂಡಿಸಿ ಸಭಾತ್ಯಾಗ ಮಾಡಿದ್ದಾರೆ.
