ಉಸಿರಾಟದ ತೊಂದರೆಯಿಂದ ಡಿಸೆಂಬರ್ 15ರ ರಾತ್ರಿ ಕರುಣಾನಿಧಿ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.

ಚೆನ್ನೈ(ಡಿ.21): ಡಿಎಂಕೆ ವರಿಷ್ಠ ಕರುಣಾನಿಧಿ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದ್ದು, ಕಾವೇರಿ ಆಸ್ಪತ್ರೆಯಿಂದ ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದೆ. ಆಸ್ಪತ್ರೆಯಲ್ಲಿ ಕರುಣಾನಿಧಿ ಚೇತರಿಸಿಕೊಂಡಿರುವ ಬಗ್ಗೆ ಆಸ್ಪತ್ರೆಯಿಂದ ಫೋಟೋಗಳೂ ರಿಲೀಸ್ ಆಗಿವೆ. ಕರುಣಾನಿಧಿ ಚೇರ್ ಮೇಲೆ ಕುಳಿತು ಟಿವಿ ನೋಡುತ್ತಿರುವ ದೃಶ್ಯಗಳು ಅವರ ಆರೋಗ್ಯ ಸುಧಾರಿಸಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

`ಡಿಎಂಕೆ ಅಧ್ಯಕ್ಷ ಡಾ.ಎಂ. ಕರುಣಾನಿಧಿ ಅವರು ಕಾವೇರಿ ಆಸ್ಪತ್ರೆಯಲ್ಲಿ ಸಂಪೂರ್ಣ ಚೇತರಿಸಿಕೊಂಡಿದ್ದು, ಆಂಟಿಬಯೋಟಿಕ್ಸ್ ಕೋರ್ಸ್ ಮುಗಿದ ಬಳಿಕ ಡಿಸ್ಚಾರ್ಜ್ ಆಗಲಿದ್ದಾರೆ' ಎಂದು ಆಸ್ಪತ್ರೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಉಸಿರಾಟದ ತೊಂದರೆಯಿಂದ ಡಿಸೆಂಬರ್ 15ರ ರಾತ್ರಿ ಕರುಣಾನಿಧಿ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು.