ಬಿಜೆಪಿ ಭ್ರಮೆ ಈಡೇರುವುದು ಕಷ್ಟ : ಸಂಸದ ಡಿ.ಕೆ.ಸುರೇಶ್
ರಾಜ್ಯ ರಾಜಕೀಯದಲ್ಲಿ ಕನಸು ಕಾಣುತ್ತಿರುವ ಬಿಜೆಪಿ ಭ್ರಮೆಯು ಈಡೇರುವುದು ಕಷ್ಟ ಎಂದು ಸಂಸದ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಆನೇಕಲ್: ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕುಮಾರಸ್ವಾಮಿಯವರೇ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ.
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ರಾಜ್ಯ ಸರ್ಕಾರ ಬದಲಾವಣೆ ಎಂಬ ಬಿಜೆಪಿಯವರ ಭ್ರಮೆ ಈಡೇರುವುದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಜೆಡಿಎಸ್, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ ಗೊಂಡ ಸಂದರ್ಭದಲ್ಲಿ ಮಾತನಾಡಿದರು. ಪುರಸಭೆ ಮಾಜಿ ಸದಸ್ಯರಾದ ಎನ್. ಎಸ್. ಪದ್ಮನಾಭ್, ರೇಣುಕಾ ಮಲ್ಲಿಕಾರ್ಜುನ್, ಚಂದ್ರಿಕಾ ಹನುಮಂತರಾಜು, ಉಷಾ ಕಾಂಗ್ರೆಸ್ ಸೇರಿದರು. ಶಾಸಕ ಬಿ. ಶಿವಣ್ಣ ಇದ್ದರು.