ಒಟ್ಟು 73 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು (ಸಿವಿಲ್‌) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಪೈಕಿ 15 ಮಂದಿ ನಗರದ ಇನ್‌ಸ್ಪೆಕ್ಟರ್‌ಗಳು ಸೇರಿದ್ದಾರೆ. 

ಬೆಂಗಳೂರು [ಸೆ.17]:  ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 73 ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು (ಸಿವಿಲ್‌) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಪೈಕಿ 15 ಮಂದಿ ನಗರದ ಇನ್‌ಸ್ಪೆಕ್ಟರ್‌ಗಳು ಸೇರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವರ್ಗಾವಣೆ ಆದೇಶದಲ್ಲಿ ಸ್ಥಳ ನಿಯುಕ್ತಿಗೊಳ್ಳದ ಅಧಿಕಾರಿಗಳು ಮುಂದಿನ ಸ್ಥಳ ನಿರೀಕ್ಷಣೆಗಾಗಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಪ್ರಧಾನ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಬೆಂಗಳೂರು ವರ್ಗಾವಣೆ ಪಟ್ಟಿ

ಕೆ.ಶಂಕರಚಾರಿ- ಸಿದ್ಧಾಪುರ, ರಾಮಪ್ಪ ಬಿ.ಗುತ್ತೇರ್‌- ತಲಘಟ್ಟಪುರ, ಪಿ.ಶಿವಸ್ವಾಮಿ- ಕೆಂಗೇರಿ ಸಂಚಾರ ಪೊಲೀಸ್‌ ಠಾಣೆ, ರವಿಕುಮಾರ್‌- ಬಿಡಿಎ, ಆರ್‌.ವಿಜಯಕುಮಾರ್‌- ಕೆಂಗೇರಿ, ಜಿ.ಟಿ.ಶ್ರೀನಿವಾಸ- ಬಸವೇಶ್ವರ ನಗರ, ಅಂಜುಮಾಲ ತಿಮ್ಮಣ್ಣ ನಾಯಕ್‌- ಸಿಸಿಬಿ, ಎಚ್‌.ಜಯರಾಜ್‌- ಮಾಜಿ ಪ್ರಧಾನಮಂತ್ರಿಗಳ ಭದ್ರತೆ, ಜಿ.ಎಂ.ಶಿವರಾಮ್‌- ಸಿಸಿಆರ್‌ಬಿ, ಎಂ.ಜೆ.ದಯಾನಂದ- ಬಸವನಗುಡಿ (ಮಹಿಳಾ ಪೊಲೀಸ್‌ ಠಾಣೆ), ಅಜೀಜ್‌ ಕಲಾದಗಿ- ಲೋಕಾಯುಕ್ತ, ಭೀಮನಗೌಡ ಎ.ಬಿರದಾರ್‌- ಲೋಕಾಯುಕ್ತ, ಮಹಾನಂದ- ಸಿಐಡಿ, ಬಿ.ಪ್ರಮೋದ್‌ ಕುಮಾರ್‌- ಹೈಕೋರ್ಟ್‌ ಜಾಗೃತ ದಳ, ಕೆ.ವಿಶ್ವನಾಥ್‌- ಜಿಗಣಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ