ರಾಜ್ಯ ಸರ್ಕಾರದಿಂದ ಮತ್ತೆ 5 ಐಎಎಸ್ ವರ್ಗ
ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು [ಸೆ.22]: ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಚ್.ವಿ.ದರ್ಶನ್ - ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೋಲಾರ ಜಿಲ್ಲಾ ಪಂಚಾಯತ್., ಪಂಡ್ವೆ ರಾಹುಲ್ ತುಕಾರಾಂ - ಆಯುಕ್ತರು, ಕಲಬುರಗಿ ನಗರ ಪಾಲಿಕೆಗೆ ವರ್ಗಾವಣೆಯಾಗಿದ್ದಾರೆ.
ಗಂಗೂಬಾಯಿ ರಮೇಶ್ ಮನಕರ್ - ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾವೇರಿ ಜಿಲ್ಲಾಪಂಚಾಯತ್., ಕೆ.ಜಿ.ಶಾಂತರಾಮ್ - ಕಾರ್ಯದರ್ಶಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ., ಪೂವಿತಾ - ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮೈಸೂರು ಜಿಲ್ಲಾಪಂಚಾಯತ್.