Asianet Suvarna News Asianet Suvarna News

ನೀರಿನ ಕೊರತೆ ಎದುರಿಸುತ್ತಿದ್ದ ಮೆಟ್ಟೂರಿಗೆ ಒಂದೇ ದಿನ 10 ಅಡಿ ನೀರು!

ಕರ್ನಾಟಕದ ಜಲಾಶಯಗಳು ತುಂಬಿದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು| ಮೆಟ್ಟೂರಿಗೆ ಒಂದೇ ದಿನ 10 ಅಡಿ ನೀರು!| 

Karnataka Floods Water Level of the Mettur Dam rises 10 feet in a Single Day
Author
Bangalore, First Published Aug 12, 2019, 10:11 AM IST

ಚೆನ್ನೈ[ಆ.12]: ಭಾರೀ ನೀರಿನ ಕೊರತೆ ಎದುರಿಸುತ್ತಿದ್ದ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಒಂದೇ ದಿನದಲ್ಲಿ 10 ಅಡಿಯಷ್ಟುನೀರು ಹರಿದು ಬಂದಿದೆ.

ಕರ್ನಾಟಕದ ಜಲಾಶಯಗಳು ತುಂಬಿದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಮತ್ತು ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ಅದು ಮೆಟ್ಟೂರು ಜಲಾಶಯ ಸೇರುತ್ತಿದೆ. ಹೀಗಾಗಿ ನಿರೀಕ್ಷೆಗೂ ಮೀರಿದ ವೇಗದಲ್ಲಿ ಜಲಾಶಯ ತುಂಬತೊಡಗಿದೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಭಾನುವಾರ ಮೆಟ್ಟೂರು ಜಲಾಶಯಕ್ಕೆ 95000 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, 1000 ಕ್ಯುಸೆಕ್‌ ಹೊರಬಿಡಲಾಗುತ್ತಿದೆ. ಗರಿಷ್ಠ 120 ಅಡಿ ನೀರು ಸಂಗ್ರಹ ಸಾಮರ್ಥ್ಯದ ಮೆಟ್ಟೂರು ಜಲಾಶಯದಲ್ಲಿ ಶನಿವಾರ 57 ಅಡಿ ನೀರು ಸಂಗ್ರಹವಾಗಿದ್ದರೆ, ಅದು ಭಾನುವಾರ 67.40 ಅಡಿಗೆ ಏರಿದೆ. ಇದೇ ವೇಗದಲ್ಲಿ ನೀರು ತುಂಬುತ್ತಾ ಬಂದಲ್ಲಿ ಇನ್ನು ಒಂದು ವಾರದಲ್ಲಿ ಜಲಾಶಯ ಬಹುತೇಕ ಭರ್ತಿಯಾಗಲಿದೆ.

Follow Us:
Download App:
  • android
  • ios