ಈಗ ಪುರಸಭೆಯ ಕಟ್ಟಡದಲ್ಲಿ ರಾಮಚಂದ್ರ ನಾಯ್ಕ ದೆವ್ವವಾಗಿ ಕಾಟ ಕೊಡಲು ಆರಂಭಿಸಿದ್ದಾನೆ ಅಂತ ಮಾತಾಡಿಕೊಳ್ತಿದ್ದಾರೆ.

ಕಾಂಗ್ರೆಸ್ ಆಡಳಿತ ಇರುವ ಭಟ್ಕಳ ಪುರಸಭೆಯ ಕಟ್ಟಡದಲ್ಲಿ ಈಗ ದೆವ್ವದ ಕಾಟ ಶುರುವಾಗಿದೆ. ದೆವ್ವಕ್ಕಾಗಿ ಈಗ ಕಟ್ಟಡದೊಳಗೆ ಸದ್ದಿಲ್ಲದೇ ಹೋಮ ಹವನ ನಡೆದಿದೆ. ಪುರಸಭೆಯ ಅಂಗಡಿಕಾರರು, ಪುರಸಭೆಗೆ ಕೆಲಸ ಮಾಡುವ ಗುತ್ತಿಗೆದಾರರ ವ್ಯವಹಾರದಲ್ಲಿ ನಷ್ಟ ಸಂಭವಿಸಿದ್ದ ಕಾರಣ ಪುರಸಭೆ ಕೆಳಂತಸ್ತಿನನಲ್ಲಿ ಹೋಮ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಸಪ್ಟೆಂಬರ್ 14 ರಂದು ಭಟ್ಕಳ ಪುರಸಭೆಯ ತೆರವು ಕಾರ್ಯಚರಣೆ ವೇಳೆ ಓರ್ವ ಪುರಸಭೆಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ರಾಮಚಂದ್ರ ನಾಯ್ಕ, ಅಂಗಡಿ ಕೈತಪ್ಪಿ ಹೋಗಲಿದೆ ಎಂಬ ಭಯದಲ್ಲಿ ಪುರಸಭೆ ಒಳಗೆ ಆಡಳಿತ ಕಛೇರಿ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈಗ ಪುರಸಭೆಯ ಕಟ್ಟಡದಲ್ಲಿ ರಾಮಚಂದ್ರ ನಾಯ್ಕ ದೆವ್ವವಾಗಿ ಕಾಟ ಕೊಡಲು ಆರಂಭಿಸಿದ್ದಾನೆ ಅಂತ ಮಾತಾಡಿಕೊಳ್ತಿದ್ದಾರೆ. ದೆವ್ವದ ಕಾಟಕ್ಕಾಗಿ ಪುರಸಭೆಯ ನೆಲಮಾಳಿಗೆಯಲ್ಲಿ ಹೋಮ ಹವನ ನಡೆದಿದೆ.